ಮೆದುಳಿಗೂ ನಾಲಗೆಗೂ ಕನೆಕ್ಷನ್ ಇಲ್ದಾಗ ಜನ ಏನೇನೋ ಮಾತಾಡ್ತಾರೆ: ರಾಜಣ್ಣ ವ್ಯಂಗ್ಯ

ಹೊಸದಿಗಂತ ವರದಿ ಹಾವೇರಿ:

ಮಾಜಿ ಸಚಿವ ಈಶ್ವರಪ್ಪ ಅವರು ಹಿರಿಯ ನಾಯಕರು ಅವರ ಹೇಳಿಕೆ ಸಂತೋಷದಿಂದ ಸ್ವಾಗತ ಮಾಡುತ್ತೇವೆ. ಸಿದ್ದರಾಮಯ್ಯನವರೆ ಹೇಳಿದ ಹಾಗೇ ಈಶ್ವರಪ್ಪ ನಾಲಿಗೆಗೂ ಮೆದುಳಿಗೂ ಲಿಂಕ್ ಇಲ್ಲ. ಕನೆಕ್ಟಿವಿಟಿ ಇಲ್ಲದಿದ್ದಾಗ ಜನ ಏನೇನೋ ಮಾತಾಡ್ತಾರೆ ಎಂದು ಸಚಿವ ರಾಜಣ್ಣ ವ್ಯಂಗ್ಯ ಮಾಡಿದ್ದಾರೆ.

ಹಾವೇರಿಯ ತಾಲೂಕಿನ ಅಗಡಿ ಗ್ರಾಮದಲ್ಲಿ ಹೇಳಿಕೆ ನೀಡಿ ಈಶ್ವರಪ್ಪ ಹೇಳಿಕೆಗೆ ಕಟು ಮಾತಿನಲ್ಲೆ ತಿವಿದ ಸಚಿವ ರಾಜಣ್ಣ, ಈಶ್ವರಪ್ಪನವರು ಈ ರೀತಿ ಹೇಳಿದ್ದಾರೆಂದು ಮಾಧ್ಯಮದಲ್ಲಿ ವರದಿಯಾಗಿ ಇದೀಗ ಬೇರೆ ರೀತಿಯಲ್ಲಿ ಹೇಳ್ತಾ ಇದಾರೆಂದು ನೀವೇ ತೋರಿಸುತ್ತಿದ್ದೀರಿ, ಹೀಗಾಗಿ ಈ ಎರಡರಲ್ಲಿ ಯಾವುದು ಸತ್ಯ ಅಂತಾ ಅವರನ್ನೆ ಕೇಳಿ ಎಂದಿದ್ದಾರೆ.

ರಾಜ್ಯಕ್ಕೆ ಅನ್ಯಾಯ ಹಿನ್ನೆಲೆ ದೆಹಲಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ ವಿಚಾರ ಮಾತನಾಡಿ, ನಮ್ಮ ರಾಜ್ಯಕ್ಕೆ ಹಾಗೂ ರಾಜ್ಯದ ನಾಯಕರಿಗೆ ಅನ್ಯಾಯ ಆದರೆ ನೋಡಿಕೊಂಡು ಕೂರಬೇಕಾ? ಇದಕ್ಕೆ ಯಡಿಯೂರಪ್ಪನವರದ್ದು ಬೆಂಬಲನಾ ಹಾಗಾದ್ರೆ? ಎಂದು ಪ್ರಶ್ನಿಸಿದರು.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!