ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾವು ರಾಮಮಂದಿರವನ್ನು ಮಂದಿರ ಎಲ್ಲಿ ಕಟ್ಟಬೇಕು ಎಂದು ಸಂಕಲ್ಪಿಸಿದ್ದೆವೋ ಅಲ್ಲೇ ಕಟ್ಟಿದ್ದೇವೆ. ಇದು 500 ವರ್ಷಗಳ ಹೋರಾಟದ ಫಲ. ಲಕ್ಷಾಂತರ ಭಾರತೀಯರ ಕನಸು ನನಸಾಗಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ರಾಮ ಮಂದಿರದಲ್ಲಿ ಬಾಲರಾಮ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿದರು.
ಇಂದು ಈ ರಾಷ್ಟ್ರದ ಹೃದಯ ರಾಮನಿಂದ ತುಂಬಿದೆ. ಪ್ರತಿ ಮನೆಯೂ ರಾಮಮಂದಿರ. ಎಲ್ಲರ ಕಣ್ಣಲ್ಲೂ ಆನಂದದ ನೀರು ತುಂಬಿತ್ತು. ಎಲ್ಲರ ರೋಮ ರೋಮಗಳಲ್ಲೂ ರಾಮನೇ ತುಂಬಿಕೊಂಡಿದ್ದಾನೆ. ಎಲ್ಲ ದಾರಿಗಳೂ ಅಯೋಧ್ಯೆಯತ್ತ ಗುರಿಯಾಗಿವೆ. ಇಂದು ತ್ರೇತಾಯುಗವೇ ಇಲ್ಲಿ ಸೃಷ್ಟಿಯಾದಂತಿದೆ ಎಂದು ಅವರು ನುಡಿದರು.