August 26, 2026
Wednesday, August 26, 2026
spot_img

ಮೈಸೂರು ದಸರಾ ಉದ್ಘಾಟಕರು ಯಾರು? ಅಂತಿಮ ನಿರ್ಧಾರ ಸಿಎಂ ಕೈಯಲ್ಲಿ ಎಂದ ಸಚಿವ ಯತೀಂದ್ರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಉದ್ಘಾಟಕರ ಆಯ್ಕೆ ಕುರಿತು ಕುತೂಹಲ ಹೆಚ್ಚಿರುವ ನಡುವೆಯೇ, ಅಂತಿಮ ತೀರ್ಮಾನವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೈಗೊಳ್ಳಲಿದ್ದಾರೆ ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ.

ದಸರಾ ಪೂರ್ವಸಿದ್ಧತಾ ಸಭೆಯ ಬಳಿಕ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ, ಉದ್ಘಾಟಕರ ಆಯ್ಕೆ ಕುರಿತು ಹಲವು ಸಲಹೆಗಳು ಬಂದಿದ್ದರೂ ಅಂತಿಮ ನಿರ್ಧಾರವನ್ನು ಸಿಎಂ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.

17 ಉಪಸಮಿತಿಗಳ ರಚನೆ

ಈ ಬಾರಿಯ ದಸರಾ ಮಹೋತ್ಸವದ ಸುಸೂತ್ರ ನಿರ್ವಹಣೆಗೆ 17 ಉಪಸಮಿತಿಗಳನ್ನು ರಚಿಸಲು ನಿರ್ಧರಿಸಲಾಗಿದೆ. ಅಗತ್ಯವಿದ್ದರೆ ಇನ್ನಷ್ಟು ಸಮಿತಿಗಳನ್ನೂ ರಚಿಸುವ ಸಾಧ್ಯತೆ ಇದೆ ಎಂದು ತಿಳಿಸಿದರು.

ಇದನ್ನೂ ಓದಿ:

ಕಂಬಳ ಆಯೋಜನೆ ಇನ್ನೂ ಅಂತಿಮವಿಲ್ಲ

ದಸರಾ ಅಂಗವಾಗಿ ಕಂಬಳ ಸ್ಪರ್ಧೆ ಆಯೋಜಿಸುವ ಬಗ್ಗೆ ಇನ್ನೂ ಯಾವುದೇ ಅಂತಿಮ ನಿರ್ಧಾರವಾಗಿಲ್ಲ. ಸಿಎಂ ಅನುಮೋದನೆ ನೀಡಿದರೆ ಸಾತಗಳ್ಳಿ ಪ್ರದೇಶದಲ್ಲಿ ಕಂಬಳ ನಡೆಸುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದರು.

ಪಾಸ್ ವಿತರಣೆಗೆ ಹೊಸ ವ್ಯವಸ್ಥೆ

ಕಳೆದ ವರ್ಷದಂತೆ ಪಾಸ್ ವಿತರಣೆಯಲ್ಲಿ ಗೊಂದಲ ಉಂಟಾಗದಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಗೋಲ್ಡ್ ಕಾರ್ಡ್ ಹೊಂದಿರುವವರಿಗೆ ಮಾತ್ರ ಗೋಲ್ಡ್ ಪಾಸ್ ನೀಡಲಾಗುವುದು. ಲಭ್ಯವಿರುವ ಆಸನಗಳ ಸಂಖ್ಯೆಗೆ ಅನುಗುಣವಾಗಿ ಮಾತ್ರ ಪಾಸ್ ವಿತರಣೆ ನಡೆಯಲಿದೆ ಎಂದು ಸಚಿವರು ಹೇಳಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !