ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ನಡೆದ ಲೋಕಸಭಾ ಚುನಾವಣೆಯ ಮತದಾನದಲ್ಲಿ ಸಕ್ರಿಯವಾಗಿ ಭಾಗವಹಿಸಿದ ನಟ ರಕ್ಷಿತ್ ಶೆಟ್ಟಿ ಮತದಾನ ಮಾಡಲು ಉಡುಪಿಗೆ ತೆರಳಿ ಮಾಧ್ಯಮಗಳ ಮುಂದೆ ಅದ್ಭುತ ಹೇಳಿಕೆ ನೀಡಿದ್ದಾರೆ. ನಾನು ಯಾರಿಗೆ ಮತ ಹಾಕುತ್ತೇನೋ ಅವರೇ ನೂರಕ್ಕೆ ನೂರು ಗೆಲ್ಲುವುದು. ಅದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿದ್ದಾರೆ.
ನಾನು ಯಾರಿಗೆ ಮತ ಹಾಕಿದ್ದೇನೆ ಎಂದು ಘೋಷಿಸುತ್ತೇನೆ. ಮತದಾನ ಮಾಡದೆ ಯಾರನ್ನೂ ದೂರುವ ಹಕ್ಕು ನಮಗಿಲ್ಲ. ಕಡ್ಡಾಯ ಮತದಾನ ಕಾನೂನು ಜಾರಿಗೆ ತರಬೇಕು ಎಂದು ಪೇಜಾವರ ಶ್ರೀಗಳು ಹೇಳಿದರು. ಇದು ಬಹಳ ಒಳ್ಳೆಯ ಉಪಾಯ ಎಂದರು.
100 ರಷ್ಟು ಮತದಾನ ಮಾಡುವುದು ಸ್ವಲ್ಪ ಕಷ್ಟ ಎಂದು ರಕ್ಷಿತ್ ಹೇಳಿದ್ದಾರೆ. ಎಲ್ಲಾ ನಾಗರಿಕರು ಮತ ಚಲಾಯಿಸುವಂತೆ ಮಾಡುವುದು ತುಂಬಾ ಕಷ್ಟ. ಮುಂದಿನ 5 ರಿಂದ 10 ವರ್ಷಗಳಲ್ಲಿ ಇದನ್ನು ಸಾಧಿಸಬಹುದು. ಅಂತರ್ಜಾಲ ಆಧಾರಿತ ಮತದಾನ ವ್ಯವಸ್ಥೆಯಿಂದ ಇದು ಸಾಧ್ಯ, ಸದ್ಯಕ್ಕೆ 100% ಮತದಾನ ಮಾಡಿಸುವುದು ಕಷ್ಟ ಸಾಧ್ಯ. ನಾನು ವೋಟು ಮಾಡುವುದಕ್ಕೋಸ್ಕರ ಊರಿಗೆ ಬಂದಿದ್ದೇನೆ ಎಂದಿದ್ದಾರೆ.