‘ಶಿವಮೊಗ್ಗ ಏರ್‌ಪೋರ್ಟ್‌ಗೆ ಬಿಎಸ್‌ವೈ ಹೆಸರಿಡೋಕೆ ತಕರಾರಿಲ್ಲ, ಆದರೆ…’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇದೇ ತಿಂಗಳ 27 ರಂದು ಉದ್ಘಾಟನೆಯಾಗುತ್ತಿರುವ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪನವರ ಹೆಸರಿಡುವ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿದ್ದಾರೆ.

ಶಿವಮೊಗ್ಗ ಏರ್‌ಪೋರ್ಟ್ ಬಿಎಸ್ ವೈ ಕನಸು, ಇದಕ್ಕೆ ಬಿಎಸ್‌ವೈ ಹೆಸರಿಟ್ರೆ ನಮ್ಮದೇನೂ ತರಕಾರಿಲ್ಲ, ಆದ್ರೆ ಏರ್‌ಪೋರ್ಟ್ ನಿರ್ಮಾಣಕ್ಕಾಗಿ ಸಾವಿರಾರು ರೈತರ ಜಮೀನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಹಣ ಹಾಗೂ ಸರ್ಕಾರಿ ನೌಕರಿ ಬಗ್ಗೆಯೂ ಮಾತನಾಡಿದ್ದಾರೆ. ರೈತರಿಗೆ ಕೊಟ್ಟ ಮಾತನ್ನು ಸರ್ಕಾರ ಉಳಿಸಬೇಕು. ಮಾಹಿತಿ ಪ್ರಕಾರ ಎಲ್ಲ ರೈತರಿಗೆ ಸಂಪೂರ್ಣ ಪರಿಹಾರ ಸಿಕ್ಕಿಲ್ಲ, ಪರಿಹಾರ ಧನ ರೈತರ ಕೈಗೆ ಆದಷ್ಟು ಬೇಗ ಸೇರಬೇಕು ಎಂದು ಡಿಕೆಶಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!