ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ರಮ್ಯಾ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾದ ಮೂಲಕ ಕಮ್ಬ್ಯಾಕ್ ಮಾಡುವುದಾಗಿ ಹೇಳಿದ್ದರು. ರಮ್ಯಾಗೆ ಸಿನಿಮಾ ಕಥೆ ತುಂಬಾನೇ ಇಷ್ಟವಾಗಿ ತಮ್ಮದೇ ಪ್ರೊಡಕ್ಷನ್ ಹೌಸ್ನ ಮೊದಲ ಸಿನಿಮಾ ಎಂದು ಘೋಷಣೆ ಮಾಡಿದ್ರು. ಹಾಗೇ ರಾಜ್ ಶೆಟ್ಟಿಗೆ ನಾಯಕಿಯಾಗ್ತೀನಿ ಎಂದು ಹೇಳಿದ್ರು.
ಆದರೆ ಇದ್ದಕ್ಕಿದ್ದಂತೆಯೇ ಸಿನಿಮಾದಿಂದ ಹೊರಬಂದಿದ್ದು, ಸಿರಿ ರವಿಕುಮಾರ್ ರಮ್ಯಾ ಜಾಗವನ್ನು ರಿಪ್ಲೇಸ್ ಮಾಡಿದ್ದರು. ಆದರೆ ರಮ್ಯಾ ಸಿನಿಮಾದಿಂದ ಹಿಂದೆ ಬಂದಿದ್ದು ಯಾಕೆ ಅನ್ನೋದು ಮಾತ್ರ ತಿಳಿದಿರಲಿಲ್ಲ.
ಇದೀಗ ಸ್ಪಷ್ಟನೆ ಸಿಕ್ಕಿದ್ದು, ನನಗೆ ಸಿನಿಮಾ ಕಥೆ ತುಂಬಾನೇ ಇಷ್ಟವಾಗಿತ್ತು, ಸೂಕ್ಷ್ಮತೆ ಹೆಚ್ಚಿದೆ. ಕಥೆ ಕೇಳಿದಮೇಲೆ ನಾನೇ ಹೀರೋಯಿನ್ ಆಗೋಣ ಎಂದುಕೊಂಡೆ. ಆದರೆ ಈ ಸಿನಿಮಾ ರಿಲೀಸ್ಗೆ ಈಗಾಗಲೇ ಒಟಿಟಿ ಸಂಸ್ಥೆಯೊಂದರ ಜೊತೆ ಒಪ್ಪಂದ ಆಗಿತ್ತು. ವರ್ಷಗಳ ನಂತರ ನನ್ನ ಕಮ್ಬ್ಯಾಕ್ ಸಿನಿಮಾ ಥಿಯೇಟರ್ನಲ್ಲಿ ರಿಲೀಸ್ ಆಗಬೇಕು ಎಂದು ರಮ್ಯಾ ಹೇಳಿದ್ದಾರೆ ಎನ್ನಲಾಗಿದೆ.