ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೆಚ್ ಡಿ ಕುಮಾರಸ್ವಾಮಿ ಅವರು ಬಿಡದಿಯಲ್ಲಿರುವ ತಮ್ಮ ತೋಟದ ಮನೆಯಲ್ಲಿ ರಾಜಕೀಯ ಚಟುವಟಿಕೆಗಳನ್ನು ನಡೆಸುತ್ತಿರುವುದನ್ನು ಉಲ್ಲೇಖಿಸಿ ಕಾಂಗ್ರೆಸ್ ಪಕ್ಷ ಮಾಡಿರುವ ಟ್ವೀಟ್ ಗಳಿಗೆ ಉತ್ತರ ನೀಡಿದ್ದಾರೆ.
ಕುಮಾರಸ್ವಾಮಿ ಅವರು ಹಬ್ಬದ ದಿನ ಫಾರ್ಮ್ಹೌಸ್ನಲ್ಲಿ ಊಟ ಮಾಡಿದ್ದು ನಿಜ, ನನ್ನ ತೋಟದಲ್ಲಿ ಸುಮಾರು 100-120 ಜನ ಕೆಲಸ ಮಾಡುತ್ತಿರುತ್ತಾರೆ, ಇವತ್ತು ಯುಗಾದಿ ಹೊಸತೊಡಕು ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎಂದ ಕುಮಾರಸ್ವಾಮಿ, ಅಲ್ಲಿ ಪಕ್ಷದ ನಾಯಕರ ಸಭೆ ನಡೆಸಿದರೆ ಕಾಂಗ್ರೆಸ್ ಗೆ ಯಾಕೆ ಹೊಟ್ಟೆಯುರಿ? ಎಂದು ಕೇಳಿದ್ದಾರೆ.
ಮೇಕೆದಾಟು ಯೋಜನೆ ಜಾರಿಗೆ ಬರಲಿ ಅಂತ ರಸ್ತೆಗಳಲ್ಲಿ ತೂರಾಡಿದ್ದು ತಾನಲ್ಲ ಎಂದ ಕುಮಾರಸ್ವಾಮಿ ಕಾಂಗ್ರೆಸ್ ನಾಯಕರು ಅಧಿಕಾರ ದುರ್ಬಳಕೆ ಮಾಡಿಕೊಂಡು ರೇಡ್ ಮಾಡಿಸುವುದನ್ನು ಅಧಿಕಾರಿಗಳಿಂದ ಫೋನ್ ಮಾಡಿಸುವ ಕೆಲಸ ನಿಲ್ಲಿಸಲಿ ಮತ್ತು ಟ್ವೀಟ್ ಗಳನ್ನು ಮಾಡುವಾಗ ಎಚ್ಚರವಹಿಸಲಿ ಎಂದರು.