March 11, 2026
Wednesday, March 11, 2026
spot_img

Why Not? | ಅಳುವನ್ನು ಬಚ್ಚಿಡಬೇಡಿ.. ಮಳೆ ಬಂದ ಮೇಲೆಯೇ ಆಕಾಶ ತಿಳಿಯಾಗುವುದು!

ನಗು ಜೀವನದ ಲಯವನ್ನು ಹೆಚ್ಚಿಸುತ್ತದೆ ಎಂಬುದು ಎಷ್ಟು ಸತ್ಯವೋ, ಅಳು ಮನಸ್ಸಿನ ಆಳದಲ್ಲಿರುವ ನೋವನ್ನು ಹೊರಹಾಕಲು ಅಷ್ಟೇ ಅಗತ್ಯ ಎಂಬುದು ಅಷ್ಟೇ ಸತ್ಯ. ಇಂದಿನ ಧಾವಂತದ ಜಗತ್ತಿನಲ್ಲಿ ನಾವು ‘ಯಾವಾಗಲೂ ನಗುತ್ತಲೇ ಇರಬೇಕು’ ಎಂಬ ಒತ್ತಡಕ್ಕೆ ಸಿಲುಕಿದ್ದೇವೆ. ಆದರೆ, ಅಳುವುದು ದೌರ್ಬಲ್ಯವಲ್ಲ, ಅದು ನಮ್ಮನ್ನು ಮಾನಸಿಕವಾಗಿ ಸದೃಢಗೊಳಿಸುವ ಒಂದು ನೈಸರ್ಗಿಕ ಪ್ರಕ್ರಿಯೆ.

ಸುರಿದು ಹೋದ ಮಳೆ ಹೇಗೆ ಧೂಳನ್ನು ತೊಳೆದು ಪರಿಸರವನ್ನು ಹಸನು ಮಾಡುತ್ತದೆಯೋ, ಹಾಗೆಯೇ ಕಣ್ಣೀರು ಮನಸ್ಸಿನ ಭಾರವನ್ನು ಇಳಿಸಿ ನೆಮ್ಮದಿ ನೀಡುತ್ತದೆ.

ಅಳುವಿನ ಮೂಲಕ ದೇಹದಲ್ಲಿರುವ ಒತ್ತಡದ ಹಾರ್ಮೋನುಗಳು ಹೊರಹೋಗುತ್ತವೆ. ಇದರಿಂದ ಮನಸ್ಸು ಹಗುರಾಗುತ್ತದೆ.

ನೋವಾದಾಗ ಅಳುವುದು ಮನುಷ್ಯ ಸಹಜ ಗುಣ. ಭಾವನೆಗಳನ್ನು ಹತ್ತಿಕ್ಕುವುದು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಪೂರಕವಲ್ಲ.

ನಗು ಮತ್ತು ಅಳು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಮುಕ್ತವಾಗಿ ನಗಿ, ಅಳು ಬಂದಾಗ ಹಿಂಜರಿಯದೆ ಅತ್ತುಬಿಡಿ. ಏಕೆಂದರೆ ಪರಿಶುದ್ಧ ಮನಸ್ಸಿನಿಂದ ಮಾತ್ರ ನೆಮ್ಮದಿಯ ಜೀವನ ಸಾಧ್ಯ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !