July 17, 2026
Friday, July 17, 2026
spot_img

ರಸ್ತೆ ತೆರಿಗೆ ಕಟ್ಟಿದ್ರೂ ಟೋಲ್ ಯಾಕೆ? ಜೂನ್ 23 ಕ್ಕೆ ಟೋಲ್ ಪ್ಲಾಜಾಗಳಿಗೆ ರೈತರ ಮುತ್ತಿಗೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕದ ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹವನ್ನು ವಿರೋಧಿಸಿ ಹಾಗೂ ರೈತರ ವಾಹನಗಳಿಗೆ ಸಂಪೂರ್ಣ ವಿನಾಯಿತಿ ನೀಡಬೇಕೆಂದು ಆಗ್ರಹಿಸಿ, ಬರುವ ಜೂನ್ 23 ರಂದು ರಾಜ್ಯಾದ್ಯಂತ ಬೃಹತ್ ಪ್ರತಿಭಟನೆಗೆ ಕರ್ನಾಟಕ ರಾಜ್ಯ ರೈತ ಸಂಘ ಕರೆ ನೀಡಿದೆ.

ಕಬ್ಬು ಬೆಳೆಗಾರರ ಸಂಘದ ನೇತೃತ್ವ

ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷರಾದ ಕುರುಬೂರು ಶಾಂತಕುಮಾರ್ ಅವರ ನೇತೃತ್ವದಲ್ಲಿ ಈ ಹೋರಾಟ ನಡೆಯಲಿದ್ದು, ಅಂದು ಹೆದ್ದಾರಿಗಳ ಎಲ್ಲಾ ಟೋಲ್ ಬೂತ್‌ಗಳ ಮುಂದೆ ರೈತರು ಧರಣಿ ನಡೆಸಲಿದ್ದಾರೆ.

ಕೃಷಿ ವಾಹನಗಳಿಗೆ ವಿನಾಯಿತಿ ನೀಡಿ

“ಕಬ್ಬು, ತರಕಾರಿ ಮತ್ತು ಹಣ್ಣುಗಳನ್ನು ಮಾರುಕಟ್ಟೆಗೆ ಸಾಗಿಸುವ ಕೃಷಿ ವಾಹನಗಳ ಮೇಲೆ ಭಾರೀ ಟೋಲ್ ಸುಂಕ ವಿಧಿಸಲಾಗುತ್ತಿದೆ. ಇದು ಈಗಾಗಲೇ ಸಂಕಷ್ಟದಲ್ಲಿರುವ ರೈತರ ಮೇಲೆ ತೀವ್ರ ಆರ್ಥಿಕ ಹೊರೆ ಉಂಟುಮಾಡುತ್ತಿದೆ. ತಕ್ಷಣವೇ ಕೃಷಿ ಉತ್ಪನ್ನ ಸಾಗಣೆ ವಾಹನಗಳಿಗೆ ಟೋಲ್‌ನಿಂದ ಮುಕ್ತಿ ನೀಡಬೇಕು,” ಎಂದು ಶಾಂತಕುಮಾರ್ ಆಗ್ರಹಿಸಿದ್ದಾರೆ.

ಡಬಲ್ ಟ್ಯಾಕ್ಸ್ ವಿರುದ್ಧ ಆಕ್ರೋಶ

ವಾಹನ ಖರೀದಿಸುವಾಗಲೇ ಮಾಲೀಕರು ಸರ್ಕಾರಕ್ಕೆ ರಸ್ತೆ ತೆರಿಗೆ (Road Tax) ಪಾವತಿಸಿರುತ್ತಾರೆ. ಹೀಗಿರುವಾಗ ಹೆದ್ದಾರಿಗಳಲ್ಲಿ ಮತ್ತೆ ಟೋಲ್ ವಸೂಲಿ ಮಾಡುವುದು ದಗಾಕೋರತನ ಎಂದು ಆಕ್ರೋಶ ಹೊರಹಾಕಿರುವ ರೈತ ಮುಖಂಡರು, ರಾಜ್ಯದ ಎಲ್ಲಾ ಟೋಲ್ ಸಂಗ್ರಹ ಕೇಂದ್ರಗಳನ್ನು ಶಾಶ್ವತವಾಗಿ ಸ್ಥಗಿತಗೊಳಿಸಬೇಕು ಎಂದು ಸರ್ಕಾರವನ್ನು ಬಲವಾಗಿ ಒತ್ತಾಯಿಸಿದ್ದಾರೆ. ಜೂನ್ 23 ರ ಈ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !