ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿಕೆಟ್ ವಂಚಿತರಾದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸಂಜೆಯೊಳಗೆ ನಿರ್ಧಾರ ಫೈನಲ್ ಮಾಡ್ತೀನಿ ಎಂದಿದ್ದಾರೆ.
ಟಿಕೆಟ್ ಸಿಗದೆ ಅಸಮಾಧಾನದಲ್ಲಿರೋ ಶೆಟ್ಟರ್ರನ್ನು ಸೆಳೆಯೋದಕ್ಕೆ ಸಿದ್ದರಾಮಯ್ಯ ಪ್ಲಾನ್ ಮಾಡಿದ್ದು, ಜಗದೀಶ್ ಶೆಟ್ಟರ್ ಕಾಂಗ್ರೆಸ್ಗೆ ಬರ್ತೀವಿ ಅಂದ್ರೆ ಸ್ವಾಗತ ಎಂದಿದ್ದಾರೆ.
ಈಗಾಗಲೇ ಸವದಿ ನಮ್ಮ ಜತೆ ಇದ್ದಾರೆ, ಶೆಟ್ಟರ್ ಕೂಡ ಅತ್ಯುತ್ತಮ ನಾಯಕ ಅವರು ನಮ್ಮ ಪಕ್ಷಕ್ಕೆ ಬಂದರೆ ಖುಷಿ ಎಂದು ಹೇಳಿದ್ದಾರೆ. ಅವರೇನೂ ಕಾಂಗ್ರೆಸ್ ಬರೋ ಬಗ್ಗೆ ಈವರೆಗೂ ಮಾತನಾಡಿಲ್ಲ, ಬರೋದಾದ್ರೆ ಸ್ವಾಗತ ಎಂದಿದ್ದಾರೆ.