ಹೊಸದಿಗಂತ ಡಿಜಿಟಲ್ ಡೆಸ್ಕ್:
ತನ್ನ ಪ್ರೀತಿಯನ್ನು ಅಂಗೀಕಾರ ಮಾಡಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ 15ಜನರ ಗ್ಯಾಂಗ್ನೊಂದಿಗೆ ಬಂದು ಯುವತಿಯನ್ನು ಕಿಡ್ನ್ಯಾಪ್ ಮಾಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ತಂಜಾವೂರು ಜಿಲ್ಲೆಯ ಅದುತುರೈ ಮೂಲದ ವಿಘ್ನೇಶ್ವರನ್ (32) ಎಂಬ ವ್ಯಕ್ತಿ ಹಲವಾರು ವರ್ಷಗಳಿಂದ ಮೈಲಾಡುತುರೈನಲ್ಲಿ ವಾಸಿಸುತ್ತಿದ್ದಾರೆ. ಅವರ ದೂರದ ಸಂಬಂಧಿಕರು ತಮ್ಮ ಮಗಳೊಂದಿಗೆ ಅವರ ಮನೆಯ ಸಮೀಪ ನೆಲೆಸಿದ್ದಾರೆ. ಆ ಯುವತಿಯನ್ನು ಇಷ್ಟಪಟ್ಟ ಈತ ತನ್ನನ್ನು ಪ್ರೀತಿಸುವಂತೆ ಸದಾ ಪೀಡಿಸುತ್ತಿದ್ದ. ಆತನ ಕೆಟ್ಟ ಅಭ್ಯಾಸಗಳಿಂದ ಬೇಸತ್ತ ಯುವತಿ ಆತನ ಪ್ರೀತಿಯನ್ನ ಅಂಗೀಕಾರ ಮಾಡದಿದ್ದಕ್ಕೆ ಕಿಡ್ನ್ಯಾಪ್ ಮಾಡಿದ್ದಾನೆ.
ವಿಘ್ನೇಶ್ ವರ್ತನೆ ವಿರುದ್ಧ ಯುವತಿ ಪೋಷಕರು ಈ ಮೊದಲೇ ಪೊಲೀಸರಿಗೆ ದೂರು ನೀಡಿದ್ರು. ಪೊಲೀಸರು ವಿಘ್ನೇಶ್ವರನನ್ನು ಠಾಣೆಗೆ ಕರೆಸಿ ಇನ್ನು ಮುಂದೆ ಆಕೆಗೆ ತೊಂದರೆ ನೀಡದಂತೆ ಎಚ್ಚರಿಕೆ ನೀಡಿ ಪತ್ರ ಬರೆಸಿಕೊಂಡಿದ್ದರು. ಬಳಿಕ ಜುಲೈ 12ರಂದು ವಿಘ್ನೇಶ್ವರನ್ ಯುವತಿಯನ್ನು ಅಪಹರಿಸಲು ಯತ್ನಿಸಿದ್ದು, ಆಕೆ ತಪ್ಪಿಸಿಕೊಂಡು ಬಂದು ಪೊಲೀಸರಿಗೆ ದೂರು ನೀಡಿದ್ದಾರೆ. ಅಂದಿನಿಂದ ತಲೆಮರೆಸಿಕೊಂಡಿದ್ದ ವಿಘ್ನೇಶ್ವರನ್ ಆಗಸ್ಟ್ 1ರ ಸೋಮವಾರ ರಾತ್ರಿ 11 ಗಂಟೆಗೆ 15 ಜನರೊಂದಿಗೆ ಬಂದ ಆತ ಯುವತಿ ಮನೆಯ ಬಾಗಿಲು ಮುರಿದು ಆಕೆಯನ್ನು ಅಪಹರಿಸಿದ್ದಾನೆ.
#TamilNadu: Fifteen men kidnap a woman in Mayiladuthurai from her residence#Mayiladuthrai #Woman #Kidnap #Kidnapped #Crime #TamilNaduNews #TamilNaduPolice #India #CrimeNews pic.twitter.com/ZsX0t0Y4s1
— Free Press Journal (@fpjindia) August 3, 2022
ಗಾಬರಿಗೊಂಡ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಪೊಲೀಸರು ವಿಶೇಷ ತಂಡ ರಚಿಸಿ ಹೆದ್ದಾರಿಯಲ್ಲಿ ಕಾರಿನಲ್ಲಿ ತೆರಳುತ್ತಿದ್ದ ವಿಘ್ನೇಶ್ವರನ್ ಹಾಗೂ ಗ್ಯಾಂಗ್ ಅನ್ನ ತಡೆದು, ಯುವತಿ ಸೇರಿದಂತೆ ಇತರ ಮೂವರನ್ನು ವಿಕ್ರಮವಾಡಿ ಟೋಲ್ ಪ್ಲಾಜಾದಲ್ಲಿ ಬಂಧಿಸಿದ್ದಾರೆ. ಅಪಹರಣದಲ್ಲಿ ಭಾಗಿಯಾಗಿರುವ ಉಳಿದವರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.