ಹೊಸದಿಗಂತ ಡಿಜಿಟಲ್ ಡೆಸ್ಕ್
ಬ್ಯಾಂಕ್ ದರೋಡೆಗೆಂದು ಕೈಯಲ್ಲಿ ಮಾರಕಾಸ್ತ್ರ ಹಿಡಿದು ಬಂದ ಕಳ್ಳನನ್ನು ಬ್ಯಾಂಕ್ ಮ್ಯಾನೇಜರ್ ಕಟ್ಟಿಂಗ್ ಪ್ಲೆಯರ್ ತೋರಿಸಿ ಬೆದರಿಸಿ ಓಡಿಸಿರುವ ಘಟನೆ ರಾಜಸ್ಥಾನದ ಶ್ರೀ ಗಂಗಾನಗರದಲ್ಲಿ ನಡೆದಿದೆ. ಸದ್ಯ ಈ ಘಟನೆಯ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ರಾಜಸ್ಥಾನದ ಮರುದಾರ ಗ್ರಾಮೀಣ ಬ್ಯಾಂಕ್ನಲ್ಲಿ ಈ ಘಟನೆ ನಡೆದಿದೆ. ಮುಖವನ್ನು ಬಟ್ಟೆಯಲ್ಲಿ ಸುತ್ತಿಕೊಂಡು ದುಡ್ಡು ಕೊಂಡೊಯ್ಯಲು ಬ್ಯಾಗ್ ಹಿಡಿದುಕೊಂಡು ಬ್ಯಾಂಕ್ಗೆ ಕಾಲಿಟ್ಟ ಕಳ್ಳ, ಮ್ಯಾನೇಜರ್ ರೌದ್ರಾವತಾರಕ್ಕೆ ಬೆದರಿ ದುಡ್ಡು ಬೇಡ ಏನೂ ಬೇಡ, ಜೀವ ಉಳಿದರೆ ಸಾಕು ಎಂದು ಮಾರಾಕಾಸ್ತ್ರ ಹಾಗೂ ಬ್ಯಾಗ್ ಅನ್ನು ಅಲ್ಲಿಯೇ ಬಿಟ್ಟು ಪರಾರಿಯಾಗುವುದನ್ನು ನೋಡಬಹುದಾಗಿದೆ.
ಮೊದಲಿಗೆ ಮಾರಕಾಸ್ತ್ರ ಹಿಡಿದು ಬಂದ ಕಳ್ಳ ಅಲ್ಲಿದ್ದ ಸಿಬ್ಬಂದಿಗೆ ಬೆದರಿಕೆ ಹಾಕಿದ್ದಾನೆ.
ಕಿರುಚಾಟಗಳನ್ನು ಕೇಳಿಸಿಕೊಂಡು ಅಲ್ಲಿಗೆ ಬಂದ ಮ್ಯಾನೇಜರ್ ಪೂನಂ ಗುಪ್ತಾತನ್ನ ಕ್ಯಾಬಿನ್ನಿಂದ ಹೊರಬಂದು ದಾಳಿಕೋರನನ್ನು ಎದುರಿಸಿದ್ದಾರೆ. ಆ ವೇಳೆ ಆಕೆಗೂ ಬೆದರಿಸಲು ಯತ್ನಿಸಿದ ಕಳ್ಳ ಹಣವನ್ನು ಕೇಳುತ್ತಾನೆ. ಜೊತೆಗೆ ತಾನು ತಂಡ ಚೀಲದಲ್ಲಿ ನಗದು ತುಂಬಲು ಉದ್ಯೋಗಿಯನ್ನು ಒತ್ತಾಯಿಸುತ್ತಾನೆ. ಈ ಪ್ರಕ್ರಿಯೆಯಲ್ಲಿ, ಅವನ ಜೇಬಿನಿಂದ ಕಟ್ಟಿಂಗ್ ಫ್ಲೆಯರ್ ಕೆಳಗೆ ಬೀಳುತ್ತದೆ.
Appreciation is must for this kind of courageous act.
Hats off to exemplary courage shown by Poonam Gupta, manager
Marudhara bank, Sriganganar. pic.twitter.com/p8pPgxPSBC— Dr Bhageerath Choudhary IRS (@DrBhageerathIRS) October 17, 2022
ಈ ಅವಕಾಶವನ್ನು ಗ್ರಹಿಸಿದ, ಮ್ಯಾನೇಜರ್ ಕಟ್ಟಿಂಗ್ ಫ್ಲೇಯರ್ ಎತ್ತಿಕೊಂಡು ದಾಳಿಕೋರನನ್ನು ಎದುರಿಸುತ್ತಾರೆ. ಆರೋಪಿ ಶ್ರೀಗಂಗಾನಗರದ ದಾವಡಾ ಕಾಲೋನಿ ನಿವಾಸಿಯಾಗಿದ್ದು, ಜವಾಹರ್ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಈ ಸಂಬಂಧ ಬ್ಯಾಂಕ್ ಆಡಳಿತ ಮಂಡಳಿ ಪೊಲೀಸರಿಗೆ ವರದಿಯನ್ನೂ ನೀಡಿದೆ.
ಪೊಲೀಸರು ಲವಿಶ್ ಅರೋರಾ ಅವರ ಕ್ರಿಮಿನಲ್ ಹಿಂದಿನದನ್ನು ಪರಿಶೀಲಿಸುತ್ತಿದ್ದಾರೆ. ಈ ವೇಳೆ ಬ್ಯಾಂಕ್ನಲ್ಲಿ ₹ 30 ಲಕ್ಷ ಹಣ ಇಟ್ಟಿದ್ದು, ಬ್ಯಾಂಕ್ನ ಮಹಿಳಾ ವ್ಯವಸ್ಥಾಪಕಿ ಧೈರ್ಯದಿಂದ ಕಳ್ಳತನವಾಗದಂತೆ ತಡೆದಿದ್ದಾರೆ ಎಂದು ಬ್ಯಾಂಕರ್ಗಳು ಹೇಳಿಕೊಂಡಿದ್ದಾರೆ.