ಕಾರ್ಯಕರ್ತರು ಕ್ರಿಯಾಶೀಲರಾಗಿ ಬದ್ಧತೆಯಿಂದ ಕೆಲಸಮಾಡಿ: ಮಹೇಶ ಟೆಂಗಿನಕಾಯಿ

ಹೊಸ ದಿಗಂತ ವರದಿ, ಹುಬ್ಬಳ್ಳಿ:

ಅವಳಿನಗರದಲ್ಲಿ ಪಕ್ಷವನ್ನು ತಳಮಟ್ಟದಲ್ಲಿ ಬಲಗೊಳಿಸಬೇಕಾಗದೆ. ಅದಕ್ಕಾಗಿ ಪಾಲಿಕೆ ಸದಸ್ಯರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಾಗಬೇಕು. ಕಾರ್ಯಕರ್ತರು ಕ್ರಿಯಾಶೀಲರಾಗಿ ಬದ್ಧತೆಯಿಂದ ಕೆಲಸಮಾಡಿ ಪಕ್ಷವನ್ನು ಉತ್ತುಂಗಕ್ಕೆ ತೆಗೆದುಕೊಂಡು ಹೋಗಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಹೇಳಿದರು.
ಇಲ್ಲಿಯ ದೇಶಪಾಂಡೆ ನಗರದ ಬಿಜೆಪಿ ಪಕ್ಷದ ಕಚೇರಿಯಲ್ಲಿ ಗುರುವಾರ ಹು-ಧಾ ಮಹಾನಗರ ಪಾಲಿಕೆ ನೂತನ ಸದಸ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಮುಂಬರುವ ದಿನಗಳಲ್ಲಿ ಪಕ್ಷದ ಕಾರ್ಯಕ್ರಮಗಳ ಅಡಿಯಲ್ಲಿ ವಾರ್ಡ ಸಮಿತಿ ಸಂಚಾಲಕರು, ಸಹ ಸಂಚಾಲಕರು, ಬೂತ್ ಮಟ್ಟದ ಕಾರ್ಯಪಡೆ, ಪೇಜ್ ಪ್ರಮುಖರ ವಾರ್ಡ ಮಟ್ಟದಲ್ಲಿ ನೇಮಕ ಮಾಡಬೇಕು ಎಂದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಹು-ಧಾ ಮಹಾನಗರ ಜಿಲ್ಲಾ ಅಧ್ಯಕ್ಷ ಸಂಜಯ ಕಪಟಕರ ಮಾತನಾಡಿ, ಈಗಾಗಲೆ ಪಕ್ಷದ ಎಲ್ಲ ವಾರ್ಡಗಳಲ್ಲಿ ಸಂಘಟನಾತ್ಮಕ ಸಭೆಗಳಲ್ಲಿ ಪಾಲ್ಗೊಂಡು ಸಭೆಗಳನ್ನು ಮಾಡುತ್ತಿದ್ದೆನೆ. ಪಕ್ಷದ ಬೂತ್ ಮಟ್ಟದಲ್ಲಿ ಜಾತಿವಾರು ಪ್ರಾತಿನಿಧ್ಯ ನೀಡುವ ಮೂಲಕ ಸಮಿತಿಗಳನ್ನು ರಚಿಸಬೇಕು. ಮುಂಬರುವ ದಿನಗಳಲ್ಲಿ ತಮ್ಮ-ತಮ್ಮ ವಾರ್ಡಗಳಲ್ಲಿ ಜನಪರ ಕೆಲಸಗಳ ಮೂಲಕ ಪಕ್ಷ ಸಂಘಟನೆಯು ಮಾಡಲು ಅವಶ್ಯವಿದೆ ಎಂದು ಸಂಜಯ ಕಪಟಕರ ಹೇಳಿದರು.
ಪಾಲಿಕೆ ಸದಸ್ಯ ಮಹಾಪೌರ ವೀರಣ್ಣ ಸವಡಿ, ಶಿವು ಹಿರೇಮಠ, ರಾಧಾಬಾಯಿ ಸಫಾರೆ, ವಿಜಯಾನಂದ ಶೆಟ್ಟಿ, ಈರೇಶ ಅಂಚಟಗೇರಿ, ರಾಜಣ್ಣ ಕೊರವಿ, ಶಂಕರ ಶೇಳಕೆ, ಶಿವು ಮೆನಸಿನಕಾಯಿ, ಸಂತೋಷ ಚವ್ಹಾಣ, ಚಂದ್ರಶೇಖರ ಮನಗುಂಡಿ, ಸತೀಶ ಹಾನಗಲ್, ಉಮಾ ಮುಕುಂದ, ರೂಪಾ ಶೆಟ್ಟಿ, ಮಿನಾಕ್ಷಿ ವಂಟಮೂರಿ, ಸೀಮಾ ಸಿದ್ದು. ಮೋಗಲಿಶೆಟ್ಟರ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!