ಹೊಸದಿಗಂತ ಡಿಜಿಟಲ್ ಡೆಸ್ಕ್ :
ಖ್ಯಾತ ಯಕ್ಷಗಾನ ಕಲಾವಿದ ಕುಂಬಳೆ ಸುಂದರ್ ರಾವ್ ನಿಧನಕ್ಕೆ ಜಗದ್ಗುರು ಡಾ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಅವರ ಆತ್ಮ ಕ್ಕೆ ಉತ್ತಮ ಸದ್ಗತಿ ಪ್ರಾಪ್ತಿ ಯಾಗಲಿ, ಅವರ ಪತ್ನಿ ಇಬ್ಬರು ಪುತ್ರರು, ಮೂವರು ಪುತ್ರಿಯರಿಗೆ ಹಾಗೂ ಅವರ ಅಪಾರ ಯಕ್ಷಗಾನ ಅಭಿಮಾನಿ ಗಳಿಗೆ ದುಃಖ ಸಹಿಸುವ ಶಕ್ತಿಯನ್ನು ಭಗವಾನ್ ಶ್ರೀ ಜಿನೇಶ್ವರ ಸ್ವಾಮಿ ನೀಡಲಿ ಎಂದು ಅವರು ಪ್ರಾರ್ಥಿಸಿದ್ದಾರೆ.
ಅವರೊಬ್ಬ ಯಕ್ಷಗಾನ ಕಲಾರಂಗದ ಅನುಭವಿ ಅರ್ಥ ದಾರಿ. ತನ್ನದೆ ಚುರುಕಿನ ಸತ್ವ ಭರಿತ ಅರ್ಥಗಾರಿಕೆಯಿಂದ, ವೇಷ ಭೂಷಣದಿಂದ ಯಕ್ಷಗಾನ ಲೋಕಕ್ಕೆ ಗೌರವ ತಂದು ಕೊಟ್ಟವರು. ಶ್ರೀ ಜೈನ ಮಠದ ಕೂಟಗಳಲ್ಲಿ ನಿರಂತರ ಭಾಗವಹಿಸಿ ಮೂಡುಬಿದಿರೆ ಸ್ವಾಮೀಜಿಗಳವರಿಂದ ಸನ್ಮಾನಿತಗೊಂಡವರು ಎಂದು ಶ್ರೀಗಳು ನೆನಪಿಸಿಕೊಂಡಿದ್ದಾರೆ.