‘ನಾನು ಯಾವ್ದು ನಾಲ್ಕೈದು ಕೊಟ್ಟಿದೇನೋ ಅಷ್ಟು ಮಾತ್ರ ಮಾಡಿ’ ಯತೀಂದ್ರ ಸಿದ್ದರಾಮಯ್ಯ ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರ ವಿಡಿಯೋವೊಂದು ವೈರಲ್ ಆಗಿದ್ದು, ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದೆ.

ಮೊಬೈಲ್‌ನಲ್ಲಿ ಮಾತನಾಡುವ ವೇಳೆ ಯತೀಂದ್ರ ನಾನು ಯಾವುದು ನಾಲ್ಕೈದು ಕೊಟ್ಟಿದ್ದೇನೋ ಅಷ್ಟು ಮಾತ್ರ ಮಾಡಿ ಎಂದು ಹೇಳಿದ್ದಾರೆ. ಯತೀಂದ್ರ ಸರ್ಕಾರದಲ್ಲಿ ಹಸ್ತಕ್ಷೇಪ ಮಾಡ್ತಿದ್ದಾರೆ, ತಂದೆಬೆನ್ನ ಹಿಂದೆ ಆಡಳಿತ ಮಾಡ್ತಿದ್ದಾರೆ ಎಂದು ವಿಪಕ್ಷ ನಾಯಕರು ಆರೋಪಿಸಿದ್ದಾರೆ.

ಮೈಸೂರಿನ ಕೀಳನಪುರ ಗ್ರಾಮದ ಜನಸಂಪರ್ಕ ಸಭೆಯಲ್ಲಿ ಮಾತನಾಡುವ ವೇಳೆ ಅಪ್ಪ ಹೇಳಿ ಎಂದು ಯತೀಂದ್ರ ಫೋನ್‌ನಲ್ಲಿ ಮಾತು ಆರಂಭಿಸ್ತಾರೆ. ಲಿಸ್ಟ್ ಬಗ್ಗೆ ಯತೀಂದ್ರ ಮಾತನಾಡಿದ್ದು, ಬೇರೆ ಲಿಸ್ಟ್ ಬೇಡ ನಾನು ಕೊಟ್ಟಿರೋದೇ ಐದು ಎಂದು ರೇಗಿದ್ದು, ಮಹದೇವರಿಗೆ ಫೋನ್ ಕೊಡಿ ಎಂದಿದ್ದಾರೆ.

ನಂತರ ಮಹದೇವ ಅವರ ಬಳಿ ಮಾತನಾಡಿ ಯಾಕೆ ಯಾವ್ಯಾವುದೋ ಕೊಡ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಬೇರೆ ಮಾತು ಬೇಡ ನಾನು ಕೊಟ್ಟಿರೋದನ್ನು ಮಾಡಿ ಎಂದು ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!