ಹೌದು ನಾನು ಮುಖ್ಯಮಂತ್ರಿ ಸ್ಥಾನ ಆಕಾಂಕ್ಷಿ, ಈಸ್ ಇಟ್ ಎನಿ ರಾಂಗ್?: ಸಿದ್ದರಾಮಯ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್‌ :

ಹೌದು ನಾನು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ, ಈಸ್ ಇಟ್ ಆಯನಿ ರಾಂಗ್? ಈ ಪ್ರಶ್ನೆ ಕೇಳಿದ್ದು, ಕಾಂಗ್ರೆಸ್‌ ನಾಯಕ (Karnataka Election) ಸಿದ್ದರಾಮಯ್ಯ.

ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಕುರ್ಚಿಗಾಗಿ ಕಿತ್ತಾಟ ಇದೆ ಎಂಬ ಪ್ರಹ್ಲಾದ್ ಜೋಶಿ ಹೇಳಿಕೆಗೆ ಅವರು ಪ್ರತಿಕ್ರಿಯಿಸಿದರು.

ಹೌದು ನಾನು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ, ಇದರಲ್ಲಿ ಏನಾದರೂ ತಪ್ಪಿದೆಯಾʼ , ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗ್ತೀನಿ ಅಂತಾರೆ, ಈಸ್ ಇಟ್ ಎನಿ ರಾಂಗ್? ಕೊನೆಗೆ ಎಂಎಲ್‌ಗಳು ಲೀಡರ್ ಆಯ್ಕೆ ಮಾಡಿ ಹೈಕಮಾಂಡ್‌ಗೆ ಕೊಡಬೇಕು. ನೀವು ಆಕಾಂಕ್ಷಿಗಳೇ ಆಗಬೇಡಿ ಅಂಥಾ ಹೇಳಿದ್ರೆ, ಇದೇನು ಡಿಕ್ಟೇಟರ್‌ಷಿಪಾ? ಎಂದು ಪ್ರಶ್ನಿಸಿದರು.

ಇದು ಪ್ರಜಾಪ್ರಭುತ್ವ. ಎಲ್ಲರಿಗೂ ಆಕಾಂಕ್ಷಿ ಆಗೋ ಅವಕಾಶ ಇದೆ. ನಿಮಗೂ ಅವಕಾಶ ಇದೆ. ಪ್ರಹ್ಲಾದ್ ಜೋಶಿಗೆ ಪಾಪ ಪ್ರಜಾಪ್ರಭುತ್ವ ಗೊತ್ತಿಲ್ಲ. ನಾವು ಹೊಡೆದಾಡುತ್ತಿಲ್ಲ. ಆಕಾಂಕ್ಷಿಗಳಿದ್ದೀವಿ. ಎಂಎಲ್‌ಎ ಗಳು ಯಾರು ನಾಯಕ ಆಗಬೇಕು ಅಂತಾ ತೀರ್ಮಾನ ಮಾಡ್ತಾರೆ. ಶಾಸಕರು, ಹೈಕಮಾಂಡ್ ಮುಖ್ಯಮಂತ್ರಿ ಯಾರಬೇಕು ಎಂದು ತೀರ್ಮಾನ ಮಾಡುತ್ತಾರೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!