ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟಿನ ಪರಿಸ್ಥಿತಿ ಎದುರಾದ ಬೆನ್ನಲ್ಲೇ ಎಂವಿಎ ಸರ್ಕಾರಕ್ಕೆ ಕುಹಕವಾಡುತ್ತಿರುವ ರೀತಿಯಲ್ಲಿರುವ ಪೋಸ್ಟರ್ ಒಂದು ಶಿವಸೇನೆಯ ವಕ್ತಾರ ಸಂಜಯ್ ರಾವತ್ ಮನೆಯೆದುರು ಕಾಣಿಸಿಕೊಂಡಿದೆ. ಈ ಪೋಸ್ಟರ್ನಲ್ಲಿ ಸಂಜಯ್ ರಾವತ್ ರವರ ಭಾವ ಚಿತ್ರದೊಂದಿಗೆ ಹಿಂದಿ ಕವಿತೆಯೊಂದರ ಸಾಲುಗಳನ್ನು ಬರೆಯಲಾಗಿದೆ “ನಿಮ್ಮ ದುರಹಂಕಾರ ಕೇವಲ ನಾಲ್ಕು ವರ್ಷ, ಆದರೆ ಅಧಿಕಾರ ನಮ್ಮ ರಕ್ತದಲ್ಲಿದೆ” (ತೇರಿ ಘಮಂಡ್ ತೋ ಚಾರ್ ದಿನ್ ಕಿ ಹೇ ಪಘಲೇ, ಹಮಾರಿ ಬಾದ್ಶಾಹಿ ತೋ ಖಾಂದಾನಿ ಹೇ) ಎಂಬ ಸಾಲುಗಳುಳ್ಳ ಪೋಸ್ಟ್ ಒಂದನ್ನು ಹಾಕಲಾಗಿದೆ.
ಈ ವಿವಾದಾತ್ಮಕ ಪೋಸ್ಟರ್ ಶಿವಸೇನೆಯ ಕಾರ್ಪೊರೇಟರ್ ದೀಪಮಲಾ ಬಾಧೆ ಅವರ ಹೆಸರಿನಲ್ಲಿ ಸಂಜಯ್ ರಾವತ್ ಅವರ ಮನೆಯ ಮುಂದೆ ಹಾಕಲಾಗಿದೆ. ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಪ್ರಕ್ಷುಬ್ಧತೆಯ ನಡುವೆ ಹಿಂದಿ ಶಾಯರಿಯೊಂದಿಗೆ ಶಿವಸೇನೆಯ ವಕ್ತಾರ ಸಂಜಯ್ ರಾವತ್ ಫೋಟೋವನ್ನು ಪೋಸ್ಟರ್ ಒಳಗೊಂಡಿದೆ. ಇದು ಉರುಳುತ್ತಿರುವ ಎಂವಿಎ ಸರ್ಕಾರಕ್ಕೆ ಮೂದಲಿಸುತ್ತಿರುವಂತೆ ತೋರುತ್ತಿದೆ.
Maharashtra | A banner, reading 'Your arrogance would last 4 days, our kingship is inherited', seen outside the residence of Shiv Sena leader Sanjay Raut in Mumbai.
The banner has been put up by Shiv Sena Corporator Deepmala Badhe. pic.twitter.com/N4WkJA0riB
— ANI (@ANI) June 22, 2022