50ಅಡಿ ಎತ್ತರದ ಡ್ಯಾಂ ಗೋಡೆ ಮೇಲೆ ಹುಚ್ಚಾಟ: ಆಯತಪ್ಪಿ ಮುಗ್ಗರಿಸಿದ ಯುವಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಯಾವುದೇ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳದೆ ಡ್ಯಾಂ ಹತ್ತುವಾಗ ಯುವಕನೊಬ್ಬ ಕಾಲು ಜಾರಿ ಕೆಳಗೆ ಬಿದ್ದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿವಿದನೂರು ತಾಲೂಕಿನಲ್ಲಿ ನಡೆದಿದೆ. ವಿಷಯ ತಿಳಿದ ಪೊಲೀಸರು ಯುವಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಯುವಕ ಡ್ಯಾಂ ಮೇಲಿಂದ ಕೆಳಗೆ ಬೀಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಗಔರಿಬಿದನೂರು ತಾಲೂಕಿನಲ್ಲಿರುವ ಶ್ರೀನಿವಾಸ ಸಾಗರ ಅಣೆಕಟ್ಟು 50 ಅಡಿ ಎತ್ತರವಿದೆ. ಸತತ ಮಳೆ ಸುರಿದ ಕಾರಣ ನೀರು ಹರಿಯಲಾರಂಭಿಸಿದ್ದು, ಹರಿಯುವ ನೀರಿನ ಮೂಲಕವೇ ಡ್ಯಾಂನ ಕಲ್ಲುಗಳನ್ನು ಹಿಡಿದು ಹತ್ತಲಾರಂಭಿಸಿದ್ದಾನೆ. ಸ್ಥಳೀಯರ ಮಾತಿಗೂ ಕಿವಿಗೊಡದೆ ಯಾವುದೇ ರಕ್ಷಣಾ ಕ್ರಮಗಳನ್ನು ಕೈಗೊಳ್ಳದೆ ಡ್ಯಾಂ ಏರುವಾಗ ಕಾಲು ಜಾರಿ ಕೆಳಗೆ ಬಿದ್ದಿದ್ದಾನೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಕೂಡಲೇ ಸ್ಥಳೀಯರು ಆತನನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ಪ್ರಾಣಾಪಾಯದಿಂದ ಯುವಕ ಪಾರಾಗಿದ್ದು, ಸ್ಥಳದಲ್ಲಿ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!