ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ, ಮೇಲೆ ಮೇಲೆ ಎಲ್ಲಾ ಸರಿ ಇದ್ದ ಹಾಗೆ ಕಾಣ್ತಾ ಇದೆ, ಈ ಸರ್ಕಾರ ಯಾವಾಗಾದ್ರೂ ಬಿದ್ದು ಹೋಗ್ಬೋದು ಎಂದು ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ರಾಜ್ಯ ಸರ್ಕಾರದ ಪ್ರಭಾವಿ ಸಚಿವರೊಬ್ಬರು ತಮ್ಮ ವಿರುದ್ಧದ ಕೇಸ್ಗಳಿಂದ ಪಾರಾಗಲು ಬಿಜೆಪಿ ನಾಯಕರ ಜೊತೆ ಚೌಕಾಸಿ ಮಾಡ್ತಾರೆ. ಆ ನಾಯಕ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಬಹುದು, ಈ ಬಗ್ಗೆ ಮಾತುಕತೆ ಆಗ್ತಾ ಇದೆ ಎಂದು ಹೇಳಿದ್ದಾರೆ.
ಪ್ರಭಾವಿ ಸಚಿವರೊಬ್ಬರು ತಮ್ಮ ಮೇಲಿನ ಪ್ರಕರಣಗಳಿಂದ ತಪ್ಪಿಸಿಕೊಳ್ಳೋಕೆ ಹರಸಾಹಸ ಮಾಡ್ತಿದ್ದಾರೆ. ನಿಮ್ಮ ಜೊತೆ ಬಂದುಬಿಡ್ತೀನಿ, ಐದು ತಿಂಗಳು ರಿಲೀಫ್ ಕೊಡಿಸಿ ಎಂದು ಬಿಜೆಪಿ ನಾಯಕರ ಬಳಿ ಹೇಳಿಕೊಂಡಿದ್ದಾರೆ.
ಎಚ್ಡಿಕೆ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಜನರು ಅಭಿಪ್ರಾಯ ಪಟ್ಟಿದ್ದಾರೆ.