ತಂಜಾವೂರಿನಲ್ಲಿ ವಿದ್ಯುತ್‌ ಸ್ಪರ್ಷಿಸಿದ ರಥ:11 ಮಂದಿ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ದೇವಸ್ಥಾನದ ರಥೋತ್ಸವದ ವೇಳೆ ಹೈ ಟೆನ್ಷನ್ ಟ್ರಾನ್ಸ್‌ಮಿಷನ್ ಲೈನ್ ತಗುಲಿ ವಿದ್ಯುತ್‌ ಸ್ಪರ್ಷವುಂಟಾದ ಪರಿಣಾಮ 11 ಮಂದಿ ಮೃತಪಟ್ಟ ಘಟನೆ ತಮಿಳುನಾಡಿನ ತಂಜಾವೂರಿನಲ್ಲಿ ನಡೆದಿದೆ. ತಂಜಾವೂರಿನ ಕಾಳಿಮೇಡು ಸಮೀಪದ ಅಪ್ಪರ್‌ ಸ್ವಾಮಿ ದೇವಾಲಯದ ರಥೋತ್ಸವದ ವೇಲೆ ಘಟನೆ ನಡೆದಿದೆ ಎನ್ನಲಾಗಿದ್ದುಯ 15 ಕ್ಕು ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ವರದಿಗಳ ಪ್ರಕಾರ ರಥಕ್ಕೆ ಅಡಚಣೆಯುಂಟಾಗಿ ಹಿಂತಿರುಗುವಾಗ ಬಾಗಿದ ಸ್ಥಿತಿಯಲ್ಲಿದ್ದ ರಥವು ಸಮೀಪದಲ್ಲಿದ್ದ ಹೈಟೆನ್ಶನ್‌ ವೈಯರ್‌ಗೆ ತಗುಲಿದೆ. ವಿದ್ಯುತ್‌ ಪ್ರವಹಿಸಿದ ಪರಿಣಾಮ ಬೆಂಕಿ ಹೊತ್ತಿಕೊಂಡಿದ್ದು ರಥದಲ್ಲಿದ್ದ ಹಲವರು ಕೆಳಕ್ಕೆ ಹಾರಿ ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಮಕ್ಕಳು ಸೇರಿದಂತೆ 11 ಮಂದಿ ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿದ ಕುಟುಂಬಸ್ಥರಿಗೆ ತಮಿಳುನಾಡಿನ ಸಿಎಂ ಎಂ.ಕೆ ಸ್ಟಾಲಿನ್‌ 5 ಲಕ್ಷ ಪರಿಹಾರ ಘೋಷಿಸಿದ್ದಾರೆ. ಈ ಕುರಿತು ಪೋಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!