ವಿವಿಧ ಪಂಚಾಯತ್’ಗಳಲ್ಲಿ 21 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಶಾಸಕ ಅಪ್ಪಚ್ಚುರಂಜನ್ ಚಾಲನೆ

ದಿಗಂತ ವರದಿ ಮಡಿಕೇರಿ:

ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮ ಪಂಚಾಯತ್’ಗಳಲ್ಲಿ ಸುಮಾರು 21ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಚಾಲನೆ ನೀಡಿದರು.
ನಾಕೂರು ಶಿರಂಗಾಲ ಗ್ರಾ.ಪಂ.ನಲ್ಇ 216.40ಲಕ್ಷ, ಕೊಡಗರಹಳ್ಳಿ ಪಂಚಾಯತ್’ನಲ್ಲಿ 214.40ಲಕ್ಷ, ಕೆದಕಲ್ ಪಂಚಾಯತ್’ನಲ್ಲಿ 124.97ಲಕ್ಷ, ಕಂಬಿಬಾಣೆ ಪಂಚಾಯತ್’ನಲ್ಲಿ 89.30ಲಕ್ಷ, ಸುಂಟಿಕೊಪ್ಪ ಪಂಚಾಯತ್’ನಲ್ಲಿ 541.52ಲಕ್ಷ, 7ನೇ ಹೊಸಕೋಟೆ ಗ್ರಾ.ಪಂ.ನಲ್ಲಿ 416 ಲಕ್ಷ ಸೇರಿದಂತೆ ಒಟ್ಟು 15.71ಕೋಟಿ ವೆಚ್ಚದ ಕಾಮಗಾರಿಗೆ ಹಾಗೂ ಪಿ.ಎಂ.ಜಿ.ಎಸ್. ವೈ ಯೋಜನೆಯ ರೂ 6 ಕೋಟಿ ಸೇರಿ ಒಟ್ಟು ರೂ. 21 ಕೋಟಿ ವೆಚ್ಚದ ಕಾಮಗಾರಿಗಳಿಗೆ ಅವರು ಭೂಮಿ ಪೂಜೆ ನೆರವೇರಿಸಿದರು. ಅಲ್ಲದೆ ಈಗಾಗಲೇ ಪೂರ್ಣಗೊಂಡಿರುವ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿದರು.
ಈ ಸಂದರ್ಭ ಅಕ್ರಮ ಸಕ್ರಮ ಸಮಿತಿ ಮಾಜಿ ಅಧ್ಯಕ್ಷ ಎಂ.ಎನ್.ಕೊಮಾರಪ್ಪ, ಯುವ ಮೋರ್ಚಾ ಅಧ್ಯಕ್ಷ ಚಂದ್ರು ಹೇರೂರು, ಬಿ.ಜೆ.ಪಿ.ಮುಖಂಡ ಗೌತಮ್, ಸಿ.ಸಿ.ಚೋಮಣಿ, ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಶಂಕರ ನಾರಾಯಣ, ಆಯಾ ಪಂಚಾಯತ್’ಗಳ ಜನಪ್ರತಿನಿಧಿಗಳು, ಅಭಿವೃದ್ಧಿ ಅಧಿಕಾರಿಗಳು ಮತ್ತಿತರರು ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!