ಹೊಸದಿಗಂತ ಡಿಜಿಟಲ್ ಡೆಸ್ಕ್
ದೇಶದ ಗಡಿಯೊಳಕ್ಕೆ ಕದ್ದು ನುಸುಳಿಬಂದಿದ್ದ 24 ರೋಹಿಂಗ್ಯಾ ಮುಸ್ಲೀಮರನ್ನು ತ್ರಿಪುರಾದ ಉನಕೋಟಿ ಜಿಲ್ಲೆಯಲ್ಲಿ ವಶಕ್ಕೆ ಪಡೆಯಲಾಗಿದೆ.
ಜಮ್ಮು ಪ್ರವೇಶಿಸಿ ಕೋಲ್ಕತ್ತಾ ಮತ್ತು ಗುವಾಹಟಿ ಮೂಲಕ ಕುಮಾರ್ಘಾಟ್ಗೆ ರೈಲಿನಲ್ಲಿ ಆಗಮಿಸಿದ್ದ ಅವರು ಅಲ್ಲಿಂದ ಕೈಲಾಶಹರ್ ಕಡೆಗೆ ತೆರಳುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಈ ಪೈಕಿ ಹತ್ತು ಮಕ್ಕಳು ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಖಚಿತ ಸುಳಿವಿನ ಮೇರೆಗೆ ಬಿಎಸ್ಎಫ್ ಯೋಧರು ಜಿತುರ್ದಿಘಿಪರ್ ಎಂಬಲ್ಲಿನ ಚೆಕ್ಕಿಂಗ್ ಗೇಟ್ ನಲ್ಲಿ ಮೂರು ಕಾರುಗಳನ್ನು ಬಿಎಸ್ ಎಫ್ ಯೋಧರು ತಡೆದು ನಿಲ್ಲಿಸಿ ಪರಿಶೀಲಿಸಿದಾಗ ರೋಹಿಂಗ್ಯ ನುಸುಳುಕೋರರು ಪ್ರಯಾಣಿಸುತ್ತಿದ್ದ ಬಗ್ಗೆ ಪತ್ತೆಯಾಗಿದೆ.
ಆ ಬಳಿಕ ರೋಹಿಂಗ್ಯಾ ವಲಸಿಗರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗಾಗಿ ಕೈಲಾಶಹರ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ವಿಚಾರಣೆ ವೇಳೆ ವಿಶ್ವಸಂಸ್ಥೆ ನೀಡಿದ ನಿರಾಶ್ರಿತರ ಚೀಟಿಯನ್ನು ಮೂವರು ತೋರಿಸಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಕಿಶೋರ್ ದೆಬ್ಬರ್ಮಾ ತಿಳಿಸಿದ್ದಾರೆ.
ಈ ಮುಂಚೆಯೂ ಏಪ್ರಿಲ್ 28 ರಂದು ಉತ್ತರ ತ್ರಿಪುರಾ ಜಿಲ್ಲೆಯ ಧರ್ಮನಗರ ರೈಲು ನಿಲ್ದಾಣದ ಬಳಿ ಆರು ರೋಹಿಂಗ್ಯಾ ವಲಸಿಗರನ್ನು ಬಂಧಿಸಲಾಗಿತ್ತು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ