ಹೊಸದಿಗಂತ ಡಿಜಿಟಲ್ ಡೆಸ್ಕ್:
ಅದೃಷ್ಟ ಯಾವಾಗ, ಯಾರಿಗೆ ಒಲಿದುಬರತ್ತೋ ಹೇಳೋಕೆ ಆಗೋದಿಲ್ಲ. ತಿರುವನಂತಪುರಂನ ಆಟೋ ಚಾಲಕ ಅನೂಪ್ ಅದೃಷ್ಟ ಖುಲಾಯಿಸಿದೆ. ಹೊಟ್ಟೆ ಪಾಡಿಗಾಗಿ ಮಲೇಷ್ಯಾಗೆ ಹೋಗಲು ನಿರ್ಧರಿಸಿ ಮೂರು ಲಕ್ಷ ರೂ. ಲೋನ್ ಪಡೆದಿದ್ದ ಅನೂಪ್ಗೆ 25 ಕೋಟಿ ರೂ ಲಾಟರಿ ಹೊಡೆದಿದೆ.
ಮೊದಲು ಅನೂಪ್ ಒಂದು ಲಾಟರಿಯನ್ನು ಖರೀದಿಸಿದ್ದರು, ಆದರೆ ಅದೇಕೋ ಮನಸ್ಸು ಬದಲಾಯಿಸಿ, ಮತ್ತೊಂದು ಟಿಕೆಟ್ ಖರೀದಿ ಮಾಡಿದರು. ಎರಡನೇ ಟಿಕೆಟ್ಗೆ ಬಹುಮಾನ ದೊರಕಿದೆ.
ಬ್ಯಾಂಕ್ನ ಲೋನ್ ಬೇಡ, ಮಲೇಷ್ಯಾಗೂ ಹೋಗೋದಿಲ್ಲ ಎಂದಿದ್ದಾರೆ ಅನೂಪ್. ಕಳೆದ 22 ವರ್ಷಗಳಿಂದ ಅನೂಪ್ ಲಾಟರಿ ಖರೀದಿ ಮಾಡುತ್ತಿದ್ದಾರೆ. ಈಗಾಗಲೇ ಐದು ಸಾವಿರ ರೂಪಾಯಿವರೆಗೂ ಹಣ ಗೆದ್ದಿದ್ದಾರೆ. ಆದರೆ ಈ ಬಾರಿ ಲಾಟರಿ ಗೆದ್ದಿರೋದು ಆಶ್ಚರ್ಯವೇ ಸರಿ, ನನಗೆ ಯಾವ ನಿರೀಕ್ಷೆಯೂ ಇರಲಿಲ್ಲ. ಲಾಟರಿ ರಿಸಲ್ಟ್ ನಾನು ನೋಡಿರಲಿಲ್ಲ. ಆದರೆ ನನ್ನ ಪತ್ನಿ ನೋಡಿದ್ದಳು. ನನ್ನ ಮೊಬೈಲ್ಗೆ ಮೆಸೇಜ್ ಕೂಡ ಬಂದಿತ್ತು.
ಎಲ್ಲಾ ಟ್ಯಾಕ್ಸ್ ಕಳೆದು 15 ಕೋಟಿ ರೂ. ಬಹುಮಾನ ದೊರೆಯಲಿದೆ. ಇದರಲ್ಲಿ ಮನೆ ಕಟ್ಟಿಸುತ್ತೇನೆ, ದಾನ ಧರ್ಮ ಮಾಡುತ್ತೇನೆ, ಸಂಬಂಧಿಕರಿಗೆ ಸಹಾಯ ಮಾಡುತ್ತೇನೆ, ಸಾಲ ತೀರಿಸುತ್ತೇನೆ ಹಾಗೂ ಹೊಟೇಲ್ ಒಂದನ್ನು ಆರಂಭಿಸುತ್ತೇನೆ ಎಂದು ಅನೂಪ್ ಹೇಳಿಕೊಂಡಿದ್ದಾರೆ.