ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ನಾಲ್ಕು ತಿಂಗಳ ಹಿಂದೆ ಒಡಿಶಾದ ಬಾಲೇಶ್ವರದಲ್ಲಿ ಸಂಭವಿಸಿದ ರೈಲು ಅಪಘಾತದಲ್ಲಿ ಮೃತಪಟ್ಟ ಹಾಗೂ ವಾರಸುದಾರಿಲ್ಲದ 28 ಮೃತದೇಹಗಳಿಗೆ ಭುವನೇಶ್ವರ ಪಾಲಿಕೆ ವತಿಯಿಂದ ಇಂದು ಅಂತ್ಯಸಂಸ್ಕಾರವನ್ನು ನೆರವೇರಿಸಲಾಗಿದೆ.
ಪಾಲಿಕೆಗೆ ಸೇರಿದ ಭರತ್ಪುರ ಸ್ಮಶಾನದಲ್ಲಿ ಮಂಗಳವಾರ ಸಂಜೆ ಆರಂಭವಾದ ಪ್ರಕ್ರಿಯೆ ಬುಧವಾರ ಬೆಳಿಗ್ಗೆ 8 ಗಂಟೆಗೆ ಮುಕ್ತಾಯಗೊಂಡಿದೆ ಎಂದು ಬಿಎಂಸಿ ಮೇಯರ್ ಸುಲೋಚನಾ ದಾಸ್ ಹೇಳಿದ್ದಾರೆ.