ಮೂವರು ವಾಹನ ಕಳ್ಳರ ಬಂಧನ: 15 ಬೈಕ್‌ ಗಳನ್ನು ವಶಕ್ಕೆ ಪಡೆದ ಪೊಲೀಸರು

ಹೊಸದಿಗಂತ ವರದಿ, ಶಿವಮೊಗ್ಗ:

ದ್ವಿಚಕ್ರ ವಾಹನ ಕಳ್ಳತನದ ಆರೋಪದ ಮೇಲೆ ಮೂವರು ಆರೋಪಿಗಳನ್ನು ಪೊಲಿಸರು ಬಂಧಿಸಿ 3.50 ಲಕ್ಷ ರೂ. ಮೌಲ್ಯದ 15 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಶಿವಮೊಗ್ಗ ವಿನಾಯಕ ನಗರದ ರಾಜಪ್ಪ ಯಾನೆ ರಾಜಾಹುಲಿ ಯಾನೆ ಮಂಜಪ್ಪ (36), ರಾಗಿಗುಡ್ಡದ ಸೈಯ್ಯದ್ ಸುಬಾನ್ (22), ಕೊಮ್ಮನಾಳು ಮಂಜುನಾಥ (24) ಬಂಧಿತ ಆರೋಪಿಗಳಾಗಿದ್ದಾರೆ.
ಸಾಗರ ಟೌನ್‌, ಸಾಗರ ಗ್ರಾಮಾಂತರ, ಶಿಕಾರಿಪುರ ಟೌನ್‌, ಭದ್ರಾವತಿ ಹಳೆನಗರ, ಮಾಳೂರು, ಹೊನ್ನಾಳಿ, ಹರಿಹರ ಟೌನ್, ಮಲೆಬೆನ್ನೂರು, ದಾವಣಗೆರೆ ಮತ್ತು ಹಾವೇರಿ ಟೌನ್‌ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಕಳ್ಳತನವಾಗಿದ್ದ ಬೈಕ್ ಗಳನ್ನು ಇವರಿಂದ ವಶಕ್ಕೆ ಪಡೆಯಲಾಗಿದೆ.
ಕಳೆದ ವರ್ಷ ಹರಿಗೆಯ ಮನೆಯೊಂದರಲ್ಲಿ ನಿಲ್ಲಿಸಿದ್ದ ಹೋರೋ ಸ್ಪೆಂಡ್ಲಾರ್ ಬೈಕ್ ಕಳುವಾಗಿದ್ದು, ಈ ದೂರಿನ ಹಿನ್ನೆಲೆಯಲ್ಲಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪತ್ತೆಗೆ ರಚಿಸಲಾಗಿದ್ದ ವಿಶೇಷ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!