ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮ್ಮ ತಲೆಯ ಮೇಲೆ 10 ಲಕ್ಷ ರೂ. ಘೋಷಿತ ಬಹುಮಾನ ಹೊಂದಿದ್ದ ಮೂವರು ನಕ್ಸಲೀಯರನ್ನು ಮಹಾರಾಷ್ಟ್ರದ ಗಡ್ಚಿರೋಲಿ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಬಂಧಿತ ಮೂವರನ್ನು ರಮೇಶ್ ಪಲ್ಲೊ (29), ತಾನಿ ಅಲಿಯಾಸ್ ಶಶಿ ಪುಂಗಟಿ (23) ಮತ್ತು ಅರ್ಜುನ್ ಅಲಿಯಾಸ್ ಮಹೇಶ್ ನರೋಟೆ (27) ಎಂದು ಗುರುತಿಸಲಾಗಿದೆ. ಕೋಯಾರ್ ಅರಣ್ಯ ಪ್ರದೇಶದಲ್ಲಿ ಸಿಆರ್ಪಿಎಫ್ ಮತ್ತು ಪೊಲೀಸ್ ಸಿಬ್ಬಂದಿ ನಡೆಸಿದ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ರಮೇಶ್ ಮತ್ತು ತಾನಿಯನ್ನು ಬಂಧಿಸಲಾಗಿದೆ. ಝರೆವಾಡ ಗ್ರಾಮದಲ್ಲಿ ನಡೆದ ಮತ್ತೊಂದು ಕಾರ್ಯಾಚರಣೆಯಲ್ಲಿ ಅರ್ಜುನ್ನನ್ನು ಬಂಧಿಸಲಾಗಿದೆ ಎಂದು ಮೂಲಗಳು ವರದಿ ಮಾಡಿವೆ.
ರಮೇಶ್ಗೆ 4 ಲಕ್ಷ, ಅರ್ಜುನ್ಗೆ 2 ಲಕ್ಷ ಮತ್ತು ತಾನಿಗೆ 4 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ರಾಜ್ಯ ಸರ್ಕಾರ ಘೋಷಿಸಿತ್ತು.
ಮೂರು ಕೊಲೆಗಳು ಮತ್ತು ಎಂಟು ಎನ್ಕೌಂಟರ್ಗಳು ಸೇರಿದಂತೆ ಒಟ್ಟು 13 ಅಪರಾಧಗಳಲ್ಲಿ ರಮೇಶ್ ಭಾಗಿಯಾಗಿದ್ದಾನೆ. ಇದೇ ವೇಳೆ ತಾನಿ ನಾಲ್ಕು ಕೊಲೆ ಪ್ರಕರಣಗಳು ಹಾಗೂ ಮೂರು ಎನ್ ಕೌಂಟರ್ ಗಳಲ್ಲಿ ಭಾಗಿಯಾಗಿದ್ದ. ಬಂಧಿತ ಮೂವರ ಪೈಕಿ ಅರ್ಜುನ್ ಅತಿ ಹೆಚ್ಚು ಕ್ರಿಮಿನಲ್ ದಾಖಲೆಗಳನ್ನು ಹೊಂದಿದ್ದು, ಏಳು ಕೊಲೆಗಳು, ಒಂಬತ್ತು ಎನ್ಕೌಂಟರ್ಗಳು ಮತ್ತು ಒಂದು ದರೋಡೆ ಸೇರಿದಂತೆ 24 ಅಪರಾಧಗಳಲ್ಲಿ ಭಾಗಿಯಾಗಿದ್ದಾನೆ.