ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನ ಅರಕ್ಕೋಣಂನಲ್ಲಿ ದೇವಸ್ಥಾನದ ಉತ್ಸವದ ವೇಳೆ ಭೀಕರ ಅಪಘಾತ ಸಂಭವಿಸಿದೆ. ಕಿಲ್ವೀಧಿ ಗ್ರಾಮದಲ್ಲಿ ದ್ರೌಪತಿ ಅಮ್ಮನ್ ಉತ್ಸವದಲ್ಲಿ ಕ್ರೇನ್ ಕುಸಿದು ನಾಲ್ವರು ಸಾವನ್ನಪ್ಪಿದ್ದು, ಒಂಭತ್ತು ಮಂದಿ ಗಾಯಗೊಂಡಿದ್ದಾರೆ. ರಕ್ಷಣಾ ತಂಡಗಳು ಮತ್ತು ಪೊಲೀಸರು ತಕ್ಷಣ ಅವರನ್ನು ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಿದರು.
ಹಲವರ ಸ್ಥಿತಿ ಗಂಭೀರವಾಗಿದೆ. ಅಪಘಾತದ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಉತ್ಸವದಲ್ಲಿ ಕ್ರೇನ್ ಬಳಸಲು ಅನುಮತಿ ಇಲ್ಲ ಎಂದು ಪೊಲೀಸರು ಕಂಡುಕೊಂಡಿದ್ದಾರೆ.
ಭಕ್ತಾದಿಗಳೆಲ್ಲ ಸಂಭ್ರಮದಿಂದ ದೇವಸ್ಥಾನದ ಮಹೋತ್ಸವದಲ್ಲಿ ಪಾಲ್ಗೊಂಡಿದ್ದಾಗ ಈ ಘಟನೆ ನಡೆದಿದೆ. ದೇವಾಲಯದ ಸುತ್ತಮುತ್ತಲಿನ ಪ್ರದೇಶವು ಭಕ್ತರ ರೋದನದಿಂದ ತುಂಬಿತ್ತು. ಸಂತ್ರಸ್ತರ ಕುಟುಂಬ ಸದಸ್ಯರು, ಸಂಬಂಧಿಕರು ಮತ್ತು ಸ್ನೇಹಿತರು ದೇವಾಲಯದ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದರು.
ತಮಿಳುನಾಡಿನಲ್ಲಿ ಪೊಂಗಲ್ ನಂತರ ಪ್ರತಿ ವರ್ಷ ದೇವಸ್ಥಾನದ ಉತ್ಸವ ನಡೆಯುತ್ತದೆ. ದೇವಾಲಯದ ಉತ್ಸವದ ಅಂಗವಾಗಿ, ಭಕ್ತರು ಕ್ರೇನ್ನಿಂದ ನೇತಾಡುವುದು ಮತ್ತು ದೇವರ ವಿಗ್ರಹಕ್ಕೆ ಹಾರ ಹಾಕಿ ನಮಸ್ಕರಿಸುತ್ತಾರೆ. ಈ ವೇಳೆ ಕ್ರೇನ್ ಏಕಾಏಕಿ ಭಕ್ತರ ಮೇಲೆ ಬಿದ್ದಿದೆ.
4 dead and 9 injured after a #CraneCollapsed during a temple festival event in Keelveethi in Arakkonam, #TamilNadu pic.twitter.com/LfpXJaCumr
— Smriti Sharma (@SmritiSharma_) January 23, 2023