ಗ್ಯಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆ- ಹಿಂದುಪರ ಪ್ರತ್ಯಕ್ಷದರ್ಶಿ ಹೇಳಿದ್ದೇನು?

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಗ್ಯಾನವಾಪಿ ಆವರಣದಲ್ಲಿ ಸಮೀಕ್ಷೆ ಪೂರ್ಣಗೊಂಡಿದ್ದು, ಈ ಬಗ್ಗೆ ಸರ್ವೆ ನಡೆಸಿದ ಆಯೋಗ ಕೋರ್ಟಿಗೆ ವರದಿ ಸಲ್ಲಿಸಿದೆ. ಆಯೋಗದ ಪರವಾಗಿ ಮಾಧ್ಯಮದ ಮುಂದೆ ಯಾರೂ ಹೇಳಿಕೆ ಕೊಡುವಂತಿಲ್ಲ. ಆದರೆ ಸರ್ವೆ ಆಯೋಗದ ಜತೆ ತೆರಳಿದ್ದ ಹಿಂದು ಅರ್ಜಿದಾರರ ಪರ ವಕೀಲರು ಹಾಗೂ ಸಮೀಕ್ಷೆದರ್ಶಿಗಳು ಅದಾಗಲೇ ಶಿವಲಿಂಗ ದೊರೆತಿರುವುದಾಗಿ ಘೋಷಿಸಿದ್ದಾರೆ.

ಕಾಶಿ ವಿಶ್ವನಾಥ ಧಾಮದ ನಂದಿ ಎತ್ತ ಮುಖ ಮಾಡಿ ನೋಡುತ್ತಿತ್ತೋ ಅದೇ ದಿಕ್ಕಿನಲ್ಲಿ ಶಿವಲಿಂಗ ದೊರೆತಿರುವುದಾಗಿ ಹಿಂದುಪರ ಪ್ರತ್ಯಕ್ಷದರ್ಶಿಗಳು ಮಾಧ್ಯಮದೆದುರು ಹೇಳಿದ್ದಾರೆ.

ಶಿವಲಿಂಗ ಸಿಕ್ಕಿದೆ ಎಂಬ ಹಿಂದುಪರ ಪ್ರತ್ಯಕ್ಷದರ್ಶಿಗಳ ಹೇಳಿಕೆಗೆ ಪುಷ್ಟಿ ನೀಡುವಂತೆ, ನ್ಯಾಯಾಲಯವು ಅದಾಗಲೇ ಆ ಪ್ರದೇಶವನ್ನು ಯಾರೂ ಪ್ರವೇಶಿಸದಂತೆ ಆದೇಶ ನೀಡಿ, ಅಲ್ಲಿನ ಆಧಾರಗಳನ್ನು ಸಂರಕ್ಷಿಸುವಂತೆ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!