ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಗ್ಯಾನವಾಪಿ ಆವರಣದಲ್ಲಿ ಸಮೀಕ್ಷೆ ಪೂರ್ಣಗೊಂಡಿದ್ದು, ಈ ಬಗ್ಗೆ ಸರ್ವೆ ನಡೆಸಿದ ಆಯೋಗ ಕೋರ್ಟಿಗೆ ವರದಿ ಸಲ್ಲಿಸಿದೆ. ಆಯೋಗದ ಪರವಾಗಿ ಮಾಧ್ಯಮದ ಮುಂದೆ ಯಾರೂ ಹೇಳಿಕೆ ಕೊಡುವಂತಿಲ್ಲ. ಆದರೆ ಸರ್ವೆ ಆಯೋಗದ ಜತೆ ತೆರಳಿದ್ದ ಹಿಂದು ಅರ್ಜಿದಾರರ ಪರ ವಕೀಲರು ಹಾಗೂ ಸಮೀಕ್ಷೆದರ್ಶಿಗಳು ಅದಾಗಲೇ ಶಿವಲಿಂಗ ದೊರೆತಿರುವುದಾಗಿ ಘೋಷಿಸಿದ್ದಾರೆ.
ಕಾಶಿ ವಿಶ್ವನಾಥ ಧಾಮದ ನಂದಿ ಎತ್ತ ಮುಖ ಮಾಡಿ ನೋಡುತ್ತಿತ್ತೋ ಅದೇ ದಿಕ್ಕಿನಲ್ಲಿ ಶಿವಲಿಂಗ ದೊರೆತಿರುವುದಾಗಿ ಹಿಂದುಪರ ಪ್ರತ್ಯಕ್ಷದರ್ಶಿಗಳು ಮಾಧ್ಯಮದೆದುರು ಹೇಳಿದ್ದಾರೆ.
#GyanvapiSurvey #KashiVishwanathTemple #kashi #GyanvapiMosque #hosadiganthaonline #hosadiganthadigital #hosadigantha pic.twitter.com/8ldNsDZEgp
— Hosadigantha (@HosadiganthaWeb) May 16, 2022
ಶಿವಲಿಂಗ ಸಿಕ್ಕಿದೆ ಎಂಬ ಹಿಂದುಪರ ಪ್ರತ್ಯಕ್ಷದರ್ಶಿಗಳ ಹೇಳಿಕೆಗೆ ಪುಷ್ಟಿ ನೀಡುವಂತೆ, ನ್ಯಾಯಾಲಯವು ಅದಾಗಲೇ ಆ ಪ್ರದೇಶವನ್ನು ಯಾರೂ ಪ್ರವೇಶಿಸದಂತೆ ಆದೇಶ ನೀಡಿ, ಅಲ್ಲಿನ ಆಧಾರಗಳನ್ನು ಸಂರಕ್ಷಿಸುವಂತೆ ಹೇಳಿದೆ.
सिविल कोर्ट ने शिवलिंग प्राप्त हुए स्थान को तत्काल प्रभाव से सील करने का आदेश दिया। साथ ही आदेश में सील किये गए स्थान पर किसी भी व्यक्ति का प्रवेश वर्जित किया। pic.twitter.com/hmF6TgFllf
— प्रसार भारती न्यूज सर्विसेज (@PBNS_Hindi) May 16, 2022