ಹೊಸದಿಗಂತ ವರದಿ, ಯಲ್ಲಾಪುರ :
ತಾಲೂಕಿನ ಅರಬೈಲ್ ಪಣಸಗುಳಿಯಲ್ಲಿ ಫಣಸಗುಳಿ ಸೇತುವೆ ದಾಟಲು ಹೋಗಿ ನೀರಿಗೆ ಬಿದ್ದ ಲಾರಿ, ಚಿರೆಕಲ್ಲು ತುಂಬಿಕೊಂಡು ಹೊರಟಿದ್ದ ಗಾಡಿ ಬಿದ್ದು ಭೀಕರ ದುರಂತ ಲಾರಿಯಲ್ಲಿದ್ದ 6 ಜನರಲ್ಲಿ 5 ಜನರ ರಕ್ಷಣೆ, ಮತ್ತೊಬ್ವನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
6 ಜನರಲ್ಲಿ 5 ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಒಬ್ಬನ ಸುಳಿವು ದೊರೆತಿಲ್ಲ.ಟ್ರಕ್ ಒಳಗಡೆಯೇ ಇರುವನೆಂದು ಹೇಳಲಾಗುತ್ತಿದೆ.