ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಗಳೂರು ನಗರದ ಪಂಪ್ವೆಲ್ ಬಳಿಯ ಲಾಡ್ಜ್ನಲ್ಲಿ ಇಂದು ವ್ಯಕ್ತಿಯ ಶವ ಪತ್ತೆಯಾಗಿದೆ.
ಇಲ್ಲಿನ ಪದ್ಮಶ್ರೀ ಲಾಡ್ಜ್ನಲ್ಲಿ ಕಾಸರಗೋಡಿನ ಉಪ್ಪಳ ನಿವಾಸಿ ಅಬ್ದುಲ್ ಕರೀಮ್ ಎನ್ನುವರ ಮೃತ ದೇಹ ಪತ್ತೆಯಾಗಿದೆ. ಇದೇ ವೇಳೆ ಶವದ ಪಕ್ಕದಲ್ಲಿ ಕೆಲವು ಮಾತ್ರೆಗಳು ಪತ್ತೆಯಾಗಿದ್ದು, ಹಲವು ಅನುಮಾನಗಳು ವ್ಯಕ್ತವಾಗಿವೆ.
ಇನ್ನು ಅಬ್ದುಲ್ ಕರೀಮ್ ಎನ್ನುವಾತ ನಿನ್ನೆ ಬೆಳಗ್ಗೆ ಪದ್ಮಶ್ರೀ ಲಾಡ್ಜ್ನಲ್ಲಿ ರೂಮ್ ಪಡೆದುಕೊಂಡಿದ್ದರು. ಮತ್ತು ಕೆಲವು ಸಮಯದ ಹಿಂದೆ ಮಹಿಳೆಯೊಬ್ಬರು ಮೃತ ವ್ಯಕ್ತಿಯನ್ನು ಭೇಟಿಯಾಗಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕರೀಂ ಕುಟುಂಬಸ್ಥರು ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಅನುಮಾನಸ್ಪದ ಸಾವು ಎಂದು ದೂರು ನೀಡಿದ್ದು, ಪೊಲೀಸದರು ತನಿಖೆ ಕೈಗೊಂಡಿದ್ದಾರೆ.