ಹೊಸದಿಗಂತ ಡಿಜಿಟಲ್ ಡೆಸ್ಕ್
ಅರುಣಾಚಲ ಪ್ರದೇಶದ ತವಾಂಗ್ ಮೇಲೆ ಚೀನಾ ಕಣ್ಣಿಟ್ಟಿದ್ದು, ಭಾರತ ಈ ವಿಚಾರದಲ್ಲಿ ಜಾಗರೂಕರಾಗಿರಬೇಕು ಎಂದು ಕಾಂಗ್ರೆಸ್ ನಾಯಕ ಹಾಗೂ ಮಾಜಿ ವಿದೇಶಾಂಗ ಖಾತೆ ರಾಜ್ಯ ಸಚಿವ ಶಶಿ ತರೂರ್ ಹೇಳಿದ್ದಾರೆ.
ಶುಕ್ರವಾರ ಡಿಸೆಂಬರ್ 9 ರಂದು ಭಾರತೀಯ ಸೇನಾ ಸಿಬ್ಬಂದಿ ಮತ್ತು ಅವರ ಚೀನಾ ಸೈನಿಕರ ನಡುವಿನ ಘರ್ಷಣೆಯ ಕುರಿತು ಮಾತನಾಡಿದ ತರೂರ್, ಈ ವಿಷಯದಲ್ಲಿ ಭಾರತೀಯ ಸೇನೆಗೆ ಇಡೀ ದೇಶದ ಬೆಂಬಲವಿದೆ ಎಂದು ಹೇಳಿದರು.
“ತವಾಂಗ್ ಮೇಲೆ ಚೀನಾ ಕಣ್ಣಿಟ್ಟಿದೆ ಎಂಬುದರಲ್ಲಿ ಸಂದೇಹವಿಲ್ಲ. ನಾವು ಅಲ್ಲಿ ಬಹಳ ಜಾಗರೂಕರಾಗಿರಬೇಕು. ನಿನ್ನೆ ನಮ್ಮ ಸೇನೆ ಮಾಡಿದ್ದಕ್ಕೆ ಇಡೀ ದೇಶದ ಬೆಂಬಲವಿದೆ” ಎಂದು ತಿರುವನಂತಪುರಂ ಸಂಸದ ತರೂರ್ ಹೇಳಿದ್ದಾರೆ.
“ಭಾರತವು ಎಲ್ಲಾರೀತಿಯಲ್ಲೂ ಒಗಟ್ಟಾಗಿದೆ ಎಂದು ಜಗತ್ತಿಗೆ ತೋರಿಸಬೇಕೆಂದು ನಾನು ರಕ್ಷಣಾ ಸಚಿವರಿಗೆ ಹೇಳಿದ್ದೇನೆ. ಪ್ರತಿಯೊಂದು ಪಕ್ಷದ ಸದಸ್ಯರು ಸೇನೆಯೊಂದಿಗೆ ಇದ್ದಾರೆ” ಎಂದು ತರೂರ್ ಇಂದು ಸಂಸತ್ತಿನಲ್ಲಿ ಹೇಳಿದರು.
ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್ನ ಎಲ್ಎಸಿ ಉದ್ದಕ್ಕೂ ಭಾರತೀಯ ಮತ್ತು ಚೀನಾದ ಸೈನಿಕರು ಘರ್ಷಣೆ ನಡೆಸಿದರು ಮತ್ತು ಭಾರತೀಯ ಸೇನೆಯು ಚೀನಾದ ಸೈನಿಕರಿಗೆ ತಕ್ಕ ಪ್ರತ್ಯುತ್ತರ ನೀಡಿತು ಎಂದು ಭಾರತೀಯ ಸೇನೆಯ ಹೇಳಿಕೆಯ ಬಳಿಕ ಅವರ ಹೇಳಿಕೆಗಳು ಬಂದಿವೆ.
ಘರ್ಷಣೆಯಲ್ಲಿ ಎರಡೂ ಕಡೆಯವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಸೇನೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಆದಾಗ್ಯೂ, ಮೂಲಗಳ ಪ್ರಕಾರ, ಮುಖಾಮುಖಿಯಲ್ಲಿ ಹೆಚ್ಚಿನ ಚೀನೀ ಸೈನಿಕರು ಗಾಯಗೊಂಡಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ