March 27, 2026
Friday, March 27, 2026
spot_img

ಸಂತ್ರಸ್ತರ ಪರಿಹಾರ ಹಣ ನುಂಗಿದ ಆರೋಪ: ಅಂದು ಕೆಬಿಸಿಯಲ್ಲಿ 50 ಲಕ್ಷ ಗೆದ್ದ ತಹಶೀಲ್ದಾರ್ ಅರೆಸ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್​ನ ಖ್ಯಾತ ನಟ ಅಮಿತಾಭ್​ ಬಚ್ಚನ್​ ನಿರೂಪಕರಾಗಿ ನಡೆಸಿಕೊಡುತ್ತಿರುವ ‘ಕೌನ್ ಬನೇಗಾ ಕರೋಡ್ ಪತಿ’ ಕಾರ್ಯಕ್ರಮದಲ್ಲಿ 50 ಲಕ್ಷ ರೂ. ಗೆದ್ದು ಜನಪ್ರಿಯತೆ ಗಳಿಸಿದ್ದ ಮಧ್ಯಪ್ರದೇಶದ ಮಹಿಳಾ ತಹಶೀಲ್ದಾರ್ ಅಮಿತಾ ಸಿಂಗ್ ತೋಮರ್ ವಿರುದ್ಧ 2.5 ಕೋಟಿ ರೂ. ಹಗರಣದಲ್ಲಿ ಭಾಗಿಯಾದ ಆರೋಪ ಕೇಳಿ ಬಂದಿದ್ದು ಈ ಹಿನ್ನೆಲೆ ಅವರನ್ನು ಬಂಧಿಸಲಾಗಿದೆ.

2021 ರಲ್ಲಿ ಗ್ವಾಲಿಯರ್​ನ ತಹಶೀಲ್ದಾರ್ ಆಗಿದ್ದಾಗ ತೋಮರ್‌ ಪ್ರವಾಹದ ಸಂತ್ರಸ್ತರಿಗೆ ನೀಡಬೇಕಿದ್ದ ಪರಿಹಾರ ಹಣವನ್ನು ದುರ್ಬಳಕೆ ಮಾಡಿದ್ದಾರೆ ಎಂಬ ಆರೋಪವಿದ್ದು, ಈ ಹಿನ್ನೆಲೆ ನಾಕಾದಲ್ಲಿರುವ ಅವರ ಮನೆಯಲ್ಲಿ ಬಂಧಿಸಲಾಯಿತು.

ಈ ಪ್ರಕರಣ ಸಂಬಂಧ ತೋಮರ್‌ ವಿರುದ್ಧ ಸುಮಾರು 110 ಜನ ಸಂತ್ರಸ್ತರು ದೂರನ್ನು ದಾಖಲಿಸಿದ್ದರು. ಈ ಹಿಂದೆ ಆಕೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಜಾಗೊಂಡಿತ್ತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !