May 7, 2026
Thursday, May 7, 2026
spot_img

ಮಾಲಿನ್ಯದ ಕಪಿಮುಷ್ಠಿಯಿಂದ ಮಂಗಳೂರು ಮುಕ್ತ: ಬೆಂಗಳೂರಿಗರಿಗೆ ಬೇಕಿದೆ ಹೆಚ್ಚಿನ ಜಾಗೃತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕದ ಪ್ರಮುಖ ನಗರಗಳಾದ ಬೆಂಗಳೂರು ಮತ್ತು ಮಂಗಳೂರಿನಲ್ಲಿ ವಾಯು ಗುಣಮಟ್ಟ ಇತ್ತೀಚಿನ ದಿನಗಳಲ್ಲಿ ಗಮನಾರ್ಹ ಸುಧಾರಣೆ ಕಂಡಿದೆ. ಆದರೆ, ಅಂಕಿಅಂಶಗಳು ಉತ್ತಮವಾಗಿ ಕಾಣುತ್ತಿದ್ದರೂ, ಜನರ ಆರೋಗ್ಯದ ದೃಷ್ಟಿಯಿಂದ ಪರಿಸ್ಥಿತಿ ಇನ್ನೂ ಸಂಪೂರ್ಣವಾಗಿ ಹತೋಟಿಗೆ ಬಂದಿಲ್ಲ ಎಂದು ತಜ್ಞರು ಎಚ್ಚರಿಸಿದ್ದಾರೆ.

ಕೆಲವು ತಿಂಗಳ ಹಿಂದೆ ಮಂಗಳೂರಿನ ವಾಯು ಗುಣಮಟ್ಟ ತೀವ್ರ ಕಳಪೆ ಮಟ್ಟಕ್ಕೆ ತಲುಪಿ ಆತಂಕ ಸೃಷ್ಟಿಸಿತ್ತು. ಆದರೆ ಇತ್ತೀಚಿನ ವರದಿಗಳ ಪ್ರಕಾರ, ಮಂಗಳೂರಿನ ಗಾಳಿಯ ಗುಣಮಟ್ಟದಲ್ಲಿ ಗಣನೀಯ ಸುಧಾರಣೆ ಕಂಡುಬಂದಿದ್ದು, ಇಂದು AQI 63 ದಾಖಲಾಗಿದೆ. ಇದು ರಾಜ್ಯದ ಉಳಿದ ನಗರಗಳಿಗೆ ಹೋಲಿಸಿದರೆ ಅತ್ಯಂತ ಉತ್ತಮ ಮಟ್ಟವಾಗಿದೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು ವಾಯು ಗುಣಮಟ್ಟ ಸೂಚ್ಯಂಕ 122 ರಷ್ಟಿದೆ. ಕಳೆದ ವಾರಗಳಿಗೆ ಹೋಲಿಸಿದರೆ ಇದು ಸುಧಾರಿತ ಮಟ್ಟವೆಂದು ಪರಿಗಣಿಸಲ್ಪಟ್ಟರೂ, ತಜ್ಞರ ಪ್ರಕಾರ ಇದು ಇನ್ನೂ ‘ಅನಾರೋಗ್ಯಕರ’ ವಲಯದಲ್ಲೇ ಇದೆ.

ಒಟ್ಟಾರೆಯಾಗಿ, ಕರಾವಳಿ ನಗರಿ ಮಂಗಳೂರು ಶುದ್ಧ ಗಾಳಿಯತ್ತ ಹೆಜ್ಜೆ ಹಾಕುತ್ತಿದ್ದರೆ, ಬೆಂಗಳೂರು ಇನ್ನೂ ಮಾಲಿನ್ಯದ ಸುಳಿಯಿಂದ ಸಂಪೂರ್ಣವಾಗಿ ಹೊರಬರಬೇಕಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !