ಹೊಸದಿಗಂತ ವರದಿ ಹುಬ್ಬಳ್ಳಿ:
ಹುಬ್ಬಳ್ಳಿ-ಧಾರವಾಡ ನೂತನ ಪೊಲೀಸ್ ಆಯುಕ್ತರನ್ನಾಗಿ ಬೋರಸೆ ಭೂಷಣ ಗುಲಾಬ್ರಾವ್ ಅವರನ್ನು ಆಯ್ಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಇಲ್ಲಿನ ಆಯುಕ್ತರಾಗಿದ್ದ ಎನ್.ಶಶಿಕುಮಾರ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಇನ್ನೂ ಯಾವುದೇ ಸ್ಥಳ ಗುರುತಿಸಿಲ್ಲ. ಆದರೆ ಎನ್. ಶಶಿಕುಮಾರ ಅವರು ವರ್ಗಾವಣೆ ಆಗುತ್ತಾರೆ ಎಂಬ ವಂದತಿಗೆ ಹರಡಿತ್ತು. ಈಗ ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ.
ಇದನ್ನೂ ಓದಿ:
ನೂತನ ಆಯುಕ್ತ ಬೋರಸೆ ಭೂಷಣ ಗುಲಾಬ್ರಾವ್ 2009ನೇ ಬ್ಯಾಚ್ ನವರಾಗಿದ್ದು, ಸದ್ಯ ಬೆಳಗಾವಿ ನಗರ ಪೊಲೀಸ್ ಆಯುಕ್ತರಾಗಿದ್ದರು.



