ಹೊಸದಿಗಂತ ವರದಿ ರಾಮನಗರ :
ಚನ್ನಪಟ್ಟಣದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನವನ್ನು ಬಿಜೆಪಿ ವತಿಯಿಂದ ವಿಶೇಷವಾಗಿ ಆಚರಿಸಲಾಯಿತು. ಪಟ್ಟಣದ ಕೊಲ್ಲಾಪುರದಮ್ಮನವರ ದೇವಸ್ಥಾನದ ಆವರಣದಲ್ಲಿ ಬಿಜೆಪಿ ಜಿಲ್ಲಾದ್ಯಕ್ಷ ಅಧ್ಯಕ್ಷ ಎಂ.ಎನ್. ಆನಂದಸ್ವಾಮಿ ಅವರು ಪೌರ ಕಾರ್ಮಿಕರ ಪಾದ ತೊಳೆದು ಪೂಜೆ ಮಾಡಿದರು.
ಎಲ್ಲರನ್ನೂ ಕುರ್ಚಿಯಲ್ಲಿ ಸಾಲಾಗಿ ಕೂರಿಸಿ ಪ್ರತಿಯೊಬ್ಬರ ಪಾದಗಳಿಗೆ ಆನಂದಸ್ವಾಮಿ ಅವರು ನೀರು ಹಾಕಿ ತೊಳೆಯಲು ಮುಂದಾದಾಗ ಬಹುತೇಕ ಮಹಿಳೆಯರು ಅಂಜಿಕೊಂಡರು. ಕಾಲು ಹಿಂದಕ್ಕೆ ಎಳೆದುಕೊಂಡು ‘ಇರಲಿ ಬಿಡಣ್ಣಾ…’ ಎಂದು ಸಂಕೋಚ ವ್ಯಕ್ತಪಡಿಸಿದರು.
ಅದಕ್ಕೆ ಆನಂದಸ್ವಾಮಿ, ‘ಇರಲಿ ಬಿಡವ್ವ’ ಎಂದು ಅವರ ಕಾಲಿಗೆ ನೀರು ಹಾಕಿ ತೊಳೆದು ಪೂಜೆ ಮಾಡಿದರು. ಚನ್ನಪಟ್ಟಣ ನಗರ ಘಟಕದ ಅಧ್ಯಕ್ಷ ಚೇತನ್ ಕುಮಾರ್ ಸೇರಿದಂತೆ ಪಕ್ಷದ ಇತರ ಪದಾಧಿಕಾರಿಗಳು ಅವರಿಗೆ ಸಾಥ್ ನೀಡಿದರು.
ಇದನ್ನೂ ಓದಿ:
ಈ ಸಂದರ್ಭದಲ್ಲಿ ಸಂಸದ ಡಾ. ಸಿ.ಎನ್. ಮಂಜುನಾಥ್ ಅವರು ಪೌರ ಕಾರ್ಮಿಕರ ಮೇಲೆ ಹೂವು ಎರಚಿ, ಪ್ರತಿಯೊಬ್ಬರಿಗೂ ಹೊಸ ಸೀರೆಯೊಂದಿಗೆ ಬಾಗಿನ ಅರ್ಪಿಸಿ ಗೌರವ ಸಮರ್ಪಣೆ ಮಾಡಿದರು. ಬಳಿಕ ಮಾತನಾಡಿದ ಅವರು, ಪೌರ ಕಾರ್ಮಿಕರು ನಮ್ಮ ಸಮಾಜದ ಸ್ವಚ್ಛತೆಯ ರಾಯಭಾರಿಗಳು ಎಂದು ತಿಳಿಸಿದರು.



