ಹೊಸದಿಗಂತ ಡಿಜಿಟಲ್ ಡೆಸ್ಕ್:
ಉದ್ಯಮಿಯೊಬ್ಬರು ಡೆತ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹುಳಿಮಾವು ಠಾಣಾ ವ್ಯಾಪ್ತಿಯ ಅಕ್ಷಯನಗರದ ಉದ್ಯಮಿ ಕಲಾಲ್ ದತ್ತ(40) ನಿನ್ನೆ(ಜನವರಿ 06) ಸಂಜೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಡೆತ್ ನೋಟ್ ಬರೆದಿಟ್ಟಿದ್ದು, ಸಾಲದಿಂದ ಬೇಸತ್ತು ಬಡ್ಡಿ ಟಾರ್ಚರ್ಗೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.
ಸಾಲದಿಂದ ಬೇಸತ್ತು ಬಡ್ಡಿ ಟಾರ್ಚರ್ಗೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಡೆತ್ನೋಟ್ನಲ್ಲಿ ಉಲ್ಲೇಖವಾಗಿದೆ. ಹಾಗೇ ಡೆತ್ ನೋಟ್ ನಲ್ಲಿ ಪತ್ನಿಗೆ ಕ್ಷಮೆ ಕೇಳಿದ್ದಾರೆ. ಇನ್ನು ಈ ಸಂಬಂಧ ಮೃತ ಕಲಾಲ್ ದತ್ತ ಸಜಿನಿ, ತಮ್ಮ ಪತಿಯ ಬ್ಯುಸಿನೆಸ್ ಪಾರ್ಟನರ್ ವಿರುದ್ಧ ದೂರು ದಾಖಲಿಸಿದ್ದಾರೆ.
2016 ರಿಂದ ಮೃತ ಕಲಾಲ್ ದತ್ತ ಹಾಗೂ ಎಜಿ ಮರಿಸ್ವಾಮಿ ಎನ್ನುವರು ಸೇರಿಕೊಂಡು ಸಾಯಿ ಫೆಸಿಲಿಟಿ ಸರ್ವೀಸಸ್ ಕಂಪನಿ ನಡೆಸುತ್ತಿದ್ದರು. ಈ ವೇಳೆ ಮರಿಸ್ವಾಮಿ ಸುಮಾರು ನಾಲ್ಕು ಕೋಟಿ ಹಣ ಪಡೆದು ವಂಚನೆ ಮಾಡಿರುವುದಾಗಿ ಮೃತ ಉದ್ಯಮಿ ಕಲಾಲ್ ದತ್ತ ಪತ್ನಿ ಸಜಿನಿ ಅವರು ಹುಳಿಮಾವು ಠಾಣೆಯಲ್ಲಿ ದೂರು ನೀಡಿದ್ದಾರೆ.