ಹೊಸದಿಗಂತ ವರದಿ, ಮೈಸೂರು:
ಸಾಲ ಭಾದೆ ತಾಳದೆ ರೈತನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಹುಣಸೂರು ತಾಲೂಕಿನ ಹರವೆ ಕಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿಯಾದ ದೇವೇಗೌಡ (೬೩) ಆತ್ಮಹತ್ಯೆ ಮಾಡಿಕೊಂಡವರು. ಇವರು ತಮ್ಮ ೧.೦೩ ಎಕರೆ ಜಮೀನಿನಲ್ಲಿ ವ್ಯವಸಾಯ ಮಾಡಲೆಂದು ಕಟ್ಟೆಮಳಲವಾಡಿ ಶಾಖೆಯ ಐಒಬಿ ಬ್ಯಾಂಕ್ನಲ್ಲಿ ೯ ಲಕ್ಷರೂ ಹಾಗೂ ಖಾಸಗಿ ಬ್ಯಾಂಕ್ನಿoದ ೫ ಲಕ್ಷರೂ ಸಾಲ ಮಾಡಿದ್ದರು. ಆದರೆ ಬಿತ್ತಿದ್ದ ಬೆಳೆ ಮಳೆಯಿಲ್ಲದೆ ನಷ್ಟಗೀಡಾದ ಕಾರಣ ಸಾಲವನ್ನು ಮರುಪಾವತಿಸಿರಲಿಲ್ಲ. ಈ ಹಿನ್ನಲೆಯಲ್ಲಿ ಬ್ಯಾಂಕ್ನಿoದ ನೋಟಿಸ್ ನೀಡಲಾಗಿತ್ತು.
ಸಾಲ ತೀರಿಸಲು ಬೇರೆ ದಾರಿ ಕಾಣದೆ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತನ ಪುತ್ರ ದೇವ್ ನೀಡಿದ ದೂರಿನ ಮೇಲೆ ಹುಣಸೂರು ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.