ಕಿಡ್ನಾಪ್ ಪ್ರಕರಣದಲ್ಲಿ ಡಿ.ರವಿಶಂಕರ್ ಕೈವಾಡವಿದೆ ಎಂದ ಜೆಡಿಎಸ್ ಜಿಲ್ಲಾಧ್ಯಕ್ಷ: ಮಾನನಷ್ಟ ಮೊಕದ್ದಮೆ ಎಚ್ಚರಿಕೆ ಕೊಟ್ಟ ಶಾಸಕ

ಹೊಸದಿಗಂತ ವರದಿ, ಮೈಸೂರು:

ಜೆಡಿಎಸ್‌ನ ಮಾಜಿ ಸಚಿವ ಹೆಚ್ .ಡಿ ರೇವಣ್ಣ ವಿರುದ್ದ ದಾಖಲಾಗಿರುವ ಮಹಿಳೆಯೊಬ್ಬರ ಕಿಡ್ನಾಪ್ ಪ್ರಕರಣದಲ್ಲಿ ಕೆ.ಆರ್ ನಗರ ಶಾಸಕನ ಕೈವಾಡವಿದೆ ಎಂದು ಆರೋಪಿಸಿದ್ದ ಹಾಸನ ಜೆಡಿಎಸ್ ಜಿಲ್ಲಾಧ್ಯಕ್ಷ ಲಿಂಗೇಶ್ ಗೆ ಕೆ.ಆರ್ ನಗರ ಕಾಂಗ್ರೆಸ್ ಶಾಸಕ ಡಿ.ರವಿಶಂಕರ್ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಶಾಸಕ ಡಿ.ರವಿಶಂಕರ್, ನನ್ನ ವಿರುದ್ದ ಆರೋಪಿಸಿದವರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ . ನನಗೂ ಕಿಡ್ನಾಪ್ ಪ್ರಕರಣಕ್ಕೂ ಯಾವ ಸಂಬoಧವಿಲ್ಲ. ನಾನು ಆ ದಿನ ಕೆ.ಆರ್ ನಗರದಲ್ಲೇ ಇರಲಿಲ್ಲ. ಆದರೂ ಪ್ರಕರಣದಲ್ಲಿ ನನ್ನ ಹೆಸರು ತಳುಕು ಹಾಕಿ ಆರೋಪಿಸುತ್ತಿದ್ದಾರೆ. ನನಗೆ ಸಂತ್ರಸ್ತೆ ಆಗಲಿ, ಅವರ ಮಗ ಆಗಲಿ ಸಂಪರ್ಕದಲ್ಲೇ ಇಲ್ಲ. ನಾನು ದೂರವಾಣಿ ಹಾಗೂ ನೇರವಾಗಿ ಎಂದೂ ಭೇಟಿಯಾಗಿಲ್ಲ. ಅಪಪ್ರಚಾರ ಮಾಡುವವರ ವಿರುದ್ದ ಕಾನೂನು ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!