ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಿಕ್ಷಾಟನೆಯ ವಿಚಾರದಲ್ಲಿ ಕೆಲವು ಒಪ್ಪಂದಗಳಿವೆ.. ನೀವು ನಮ್ಮ ಏರಿಯಾಗೆ ಬರಬೇಡಿ.. ನಿಮ್ಮ ಏರಿಯಾಗೆ ನಾವು ಬರುವುದಿಲ್ಲ ಎಂದು ಹೀಗಿರುವಾಗ ಭಿಕ್ಷಾಟನೆ ವಿಚಾರದಲ್ಲಿ ಕಟ್ಟುಪಾಡುಗಳನ್ನು ಧಿಕ್ಕರಿಸಿ ಪರಸ್ಪರ ಹಲ್ಲೆ ನಡೆಸಿದ್ದಾರೆ. ಎರಡು ಗುಂಪುಗಳಾಗಿ ಬೇರ್ಪಟ್ಟು ಒಡೆದು ಥಳಿಸಿದ ಘಟನೆ ಜಗಿತ್ಯಾಲ ಜಿಲ್ಲೆಯಲ್ಲಿ ನಡೆದಿದೆ.
ಕೋಲೆಬಸವ ಜನರು ಪ್ರತಿದಿನ ಮನೆ ಮುಂದೆ ಬಂದು ಅಕ್ಕಿ, ರಾಗಿ, ದುಡ್ಡು ಯಾವುದೇ ಕೊಟ್ಟರೂ ಸ್ವೀಕರಿಸುತ್ತಾರೆ. ಇವರುಗಳು ಒಂದೊಂದು ಏರಿಯಾಗಳನ್ನು ಬುಕ್ ಮಾಡಿಕೊಂಡಿರುತ್ತಾರೆ. ಆ ಕುಟುಂಬದವರು ವರ್ಷದ ಆರು ತಿಂಗಳು ದೇಶದ ವಿವಿಧ ಭಾಗಗಳಿಗೆ ಪ್ರಯಾಣಿಸುತ್ತಾರೆ. ಅವರಲ್ಲಿ ಒಬ್ಬರು ಸಂಪೂರ್ಣವಾಗಿ ಕೋಲೆಬಸವನ ಮೇಲೆ ಅವಲಂಬಿತರಾಗಿದ್ದರೆ, ಇನ್ನೊಂದು ಬುಡಕಟ್ಟು ಯಕ್ಷಗಾನ ಕಲಾವಿದರು. ತಮ್ಮ ಆದಾಯದಿಂದ ಕುಟುಂಬವನ್ನು ಪೋಷಿಸಲು ಅವರು ಬೇರೆ ಪ್ರದೇಶಗಳಲ್ಲಿ ಬೀದಿ ನಾಟಕಗಳನ್ನು ಪ್ರದರ್ಶಿಸುತ್ತಾರೆ.
ಈ ನಡುವೆ ಒಪ್ಪಂದವನ್ನು ಮುರುದಿದ್ದಕ್ಕಾಗಿ ಎರಡೂ ಬಣಗಳ ನಡುವೆ ಮಾರಾಮಾರಿ ನಡೆದಿದೆ. ಪೊಲೀಸ್ ಠಾಣೆಯ ಅನತಿ ದೂರದಲ್ಲಿ ಪರಸ್ಪರ ಹಲ್ಲೆ ನಡೆಸಿದ್ದಾರೆ. ಕಲ್ಲು-ದೊಣ್ಣೆಗಳಿಂದ ಹಲ್ಲೆ ನಡೆಸಿದ್ದು, ಪೊಲೀಸರು ಬಂದು ಗುಂಪು ಚದುರಿಸಿದ್ದಾರೆ.