ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಪ್ರಾಪ್ತ ಬಾಲಕನಿಗೆ ಪೋಷಕರು ಟಿ.ವಿ. ನೋಡಬೇಡ ಎಂದು ಬುದ್ದಿವಾದ ಹೇಳಿ ಟಿ.ವಿ. ಆಫ್ ಮಾಡಿದ್ದಕ್ಕೆ ಬಾಲಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಕಸಬಾ ಗ್ರಾಮದ ಜೋಗಿಬೆಟ್ಟುವಿನಲ್ಲಿ ನಡೆದಿದೆ.
ವಿಟ್ಲ ಕಸಬಾ ಗ್ರಾಮದ ಜೋಗಿಬೆಟ್ಟು ನಿವಾಸಿ ವಾಮನ ಪೂಜಾರಿ ಅವರ ಹಿರಿಯ ಪುತ್ರ ಉಜ್ವಲ್ (೧೪) ಮೃತಪಟ್ಟ ಬಾಲಕ. ೮ನೇ ತರಗತಿ ಪಾಸಾಗಿ ರಜೆಯಲ್ಲಿ ಮನೆಯಲ್ಲಿದ್ದ ಉಜ್ವಲ್ ಭಾನುವಾರ ಮನೆಯಲ್ಲಿ ಟಿವಿ ನೋಡುತ್ತಿದ್ದ ಸಂದರ್ಭ ತಂದೆ ಬೆಳಿಗ್ಗೆ ಯಾಕೆ? ಟಿವಿ ನೋಡುತ್ತಿದ್ದೀಯಾ ಎಂದು ಬುದ್ದಿ ಮಾತು ಹೇಳಿ ಟಿವಿಯನ್ನು ಆಫ್ ಮಾಡಿ ಮನೆಯ ಅಂಗಳದಲ್ಲಿ ಕಟ್ಟಿಗೆ ಕೆಲಸ ಮಾಡುತ್ತಿದ್ದರು. ಸ್ವಲ್ಪ ಸಮಯ ನಂತರ ತಾಯಿ ಹೇಮಾಲತಾ ಅವರು ಮಲಗುವ ಕೋಣೆಗೆ ಒಳಗಡೆ ಚಿಲಕ ಹಾಕಿದ್ದನ್ನು ನೋಡಿ ಗಾಬರಿಗೊಂಡು ಪತಿಯನ್ನು ಕರೆದ್ದು, ಉಜ್ವಲ್ನನ್ನು ಕರೆದಾಗ ಯಾವುದೇ ರೀತಿಯಲ್ಲಿ ಪ್ರತ್ಯುತ್ತರ ನೀಡದೇ ಇದ್ದುದ್ದನ್ನು ಕಂಡು ಮಲಗುವ ಕೋಣೆಯ ಬಾಗಿಲನ್ನು ಒಡೆದು ತೆರೆದಾಗ ಕೋಣೆಯ ಒಳಗಡೆ ಫ್ಯಾನಿಗೆ ಸೀರೆಯನ್ನು ಸುತ್ತಿಕೊಂಡು ಆತ್ಮಹತ್ಯೆ ಮಾಡಿದ ಸ್ಥಿತಿಯಲ್ಲಿತ್ತು. ಆದರೆ ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆ ತಂದರೂ ಆತ ಮೃತಪಟ್ಟಿದ್ದ. ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.