ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಪ್ರದೇಶದ ಬಹ್ರೈಚ್ ಜಿಲ್ಲೆಯ ಕತರ್ನಿಯಾಘಾಟ್ ವನ್ಯಜೀವಿ ವಿಭಾಗದ ಹೊಲವೊಂದರಲ್ಲಿ ತರಕಾರಿ ಕೀಳುತ್ತಿದ್ದ 10 ವರ್ಷದ ಬಾಲಕಿಯ ಮೇಲೆ ಚಿರತೆ ದಾಳಿ ಮಾಡಿದೆ.
ಮೋತಿಪುರ ವ್ಯಾಪ್ತಿಯ ನೌಸರ್ ಗುಮ್ತಿಹಾ ಗ್ರಾಮದಲ್ಲಿ ಘಟನೆ ನಡೆದಿದ್ದು, ಸೀಮಾ ಕುಮಾರಿ ತರಕಾರಿ ಕೀಳುತ್ತಿದ್ದಾಗ ಚಿರತೆ ದಾಳಿ ಮಾಡಿ ಕಾಡಿನೊಳಗೆ ಎಳೆದುಕೊಂಡು ಹೋಗಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಸ್ವಲ್ಪ ದೂರ ಬಾಲಕಿಯನ್ನು ಎಳೆದೊಯ್ದಾಗ ಅಕ್ಕಪಕ್ಕದ ಸ್ಥಳೀಯರು ಅಲಾರಾಂ ಮಾಡಿ ಚಿರತೆ ಸುತ್ತುವರಿದಿದ್ದು, ಚಿರತೆ ಓಡಿ ಹೋಗಿದೆ ಎನ್ನಲಾಗಿದೆ.