ಹೊಸದಿಗಂತ ಡಿಜಿಟಲ್ ಡೆಸ್ಕ್:
ಓರ್ವ ಯುವಕನನ್ನು ಮರದ ಕೊಬೆಗೆ ತಲೆಕೆಳಗಾಗಿ ನೇತ ಹಾಕಿ ಮನಸೋ ಇಚ್ಛೆ ಥಳಿಸಿರುವ ದಾರುಣ ಘಟನೆ ಛತ್ತೀಸ್ಗಡದ ಬಿಲಾಸ್ಪುರ ಜಿಲ್ಲೆಯಲ್ಲಿ ನಡೆದಿದೆ. ಐವರು ವ್ಯಕ್ತಿಯನ್ನು ಕಟ್ಟಿಗೆಗಳಿಂದ ಸುತ್ತುವರೆದು ಹಲ್ಲೆ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಡಿಯೋ ವೈರಲ್ ಆಗ್ತಿದ್ದಂತೆ ಪೊಲೀಸರು ಐದು ಮಂದಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಗಳಲ್ಲಿ ಮೂವರನ್ನು ಮನೀಶ್ ಖರೆ, ಶಿವರಾಜ್ ಖರೆ ಮತ್ತು ಜಾನು ಭಾರ್ಗವ್ ಎಂದು ಗುರುತಿಸಲಾಗಿದ್ದು, ಸಂತ್ರಸ್ತ ಬಾಲಕ ಮಹಾವೀರ್ ಸೂರ್ಯವಂಶಿ ಕೂಲಿ ಕೆಲಸ ಮಾಡುತ್ತಿದ್ದಾಗಿ ವಿಚಾರಣೆಯಲ್ಲಿ ತಿಳಿದುಬಂದಿದೆ. ಸೂರ್ಯವಂಶಿ ತಮ್ಮ ಮನೆಯಲ್ಲಿ ಕಳ್ಳತನ ಮಾಡಲು ಯತ್ನಿಸಿದ್ದ ಎಂದು ಆರೋಪಿಸಿ ಹಲ್ಲೆ ಮಾಡಿರುವುದಾಗಿ ಬೆಳಕಿಗೆ ಬಂದಿದೆ.
#WATCH Chhattisgarh | A man was thrashed by 5 people as he was hung upside down from a tree in Bilaspur district
(Viral video) pic.twitter.com/hjclQDmt7m
— ANI MP/CG/Rajasthan (@ANI_MP_CG_RJ) May 1, 2022