ದಿಗಂತ ವರದಿ ವಿಜಯಪುರ:
ಪೆರೋಲ್ ರಜೆ ಮೇಲೆ ಹೋಗಿದ್ದ ಕೈದಿ ನಾಪತ್ತೆಯಾಗಿರವ ಘಟನೆ ವಿಜಯಪುರದಲ್ಲಿ ನಡೆದಿದೆ. ಹಾವೇರಿ ಜಿಲ್ಲೆಯ ಶಿಗ್ಗಾಂವ ನಿವಾಸಿ ಕಿರಣಕುಮಾರ ಹಿರೇಮಠ ಇಲ್ಲಿನ ದರ್ಗಾ ಜೈಲಿನಿಂದ ಪೆರೋಲ್ ರಜೆ ಮೇಲೆ ಹೋಗಿದ್ದವನು, ರಜೆಯ ಬಳಿಕ ಜೈಲಿಗೆ ತೆರಳದೆ ಪರಾರಿಯಾಗಿದ್ದಾನೆ.
ಹೀಗಾಗಿ ಜಾಮೀನು ನೀಡಿರುವ ಇಬ್ಬರ ವಿರುದ್ಧ ಕೇಸ್ ದಾಖಲು ಮಾಡಲಾಗಿದೆ. ಆದರ್ಶ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.