ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದ ಥಾಣೆಯಲ್ಲಿ ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿ ಹೊರಗೆ ಬಂದಿದ್ದ ವಿದ್ಯಾರ್ಥಿಯನ್ನು ಖದೀಮರು ಕಿಡ್ನಾಪ್ ಮಾಡಿ ಕೊಲೆ ಮಾಡಿದ್ದಾರೆ.
ಆರೋಪಿ ಸಲ್ಮಾನ್ ಮೌಲ್ವಿ ತನ್ನ ಹೊಸ ಮನೆ ಕಟ್ಟಲು ಹಣಕ್ಕಾಗಿ ತನ್ನದೇ ಏರಿಯಾದ ಟೈಲರ್ ಸಲ್ಮಾನ್ ಎಂಬಾತನ ಪುತ್ರನನ್ನು ಅಪಹರಿಸಿದ್ದ. ಸಂಜೆಯಾದರೂ ಪುತ್ರ ಇಬಾದ್ ಮನೆಗೆ ಬಾರದ ಕಾರಣ ಸಲ್ಮಾನ್ ಕುಟುಂಬ ಹೆದರಿತ್ತು.
ಅಷ್ಟರಲ್ಲಿ ಸಲ್ಮಾನ್ ಕುಟುಂಬಕ್ಕೆ ಹಣಕ್ಕಾಗಿ ಬೆದರಿಕೆ ಕರೆ ಮಾಡಲಾಗಿತ್ತು. ಟೈರಲ್ ಸಲ್ಮಾನ್ ಪೊಲೀಸರ ಮೊರೆ ಹೋಗಿದ್ದರು. ಪೊಲೀಸರು ಆರೋಪಿ ಇರುವ ಸ್ಥಳವನ್ನು ಪತ್ತೆ ಹಚ್ಚಿದ್ದು, ಅಷ್ಟೊತ್ತಿಗಾಗಲೇ ಬಾಲಕನನ್ನು ಕೊಂದು ಗೋಣಿಚೀಲದಲ್ಲಿ ತುಂಬಿ ಬಚ್ಚಿಡಲಾಗಿತ್ತು. ಈ ಬಗ್ಗೆ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.