ಹೊಸದಿಗಂತ ವರದಿ,ಅಂಕೋಲಾ:
ಅಡುಗೆ ಅನಿಲ ತುಂಬಿದ ಟ್ಯಾಂಕರ್ ಪಲ್ಟಿಯಾಗಿ ಕೆಲಕಾಲ ಸಂಚಾರಕ್ಕೆ ತೊಂದರೆ ಆದ ಘಟನೆ ತಾಲೂಕಿನ ಕೊಡಸಣಿ ಗಂಗಾವಳಿ ಸೇತುವೆ ಬಳಿ ಸಂಭವಿಸಿದೆ.
ಅಪಘಾತದಲ್ಲಿ ಟ್ಯಾಂಕರ್ ಚಾಲಕನಿಗೆ ಸಾದಾ ಸ್ವರೂಪದ ಗಾಯಗಳಾಗಿದ್ದು ಯಾವುದೇ ರೀತಿಯ ಅನೀಲ ಸೋರಿಕೆ ಆಗಿಲ್ಲ.
ಅಂಕೋಲಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸಂಚಾರಕ್ಕೆ ಬದಲಿ ವ್ಯವಸ್ಥೆ ಕಲ್ಪಿಸಿ ಕ್ರೇನ್ ಬಳಸಿ ಟ್ಯಾಂಕರ್ ತೆರುವು ಕಾರ್ಯಾಚರಣೆ ನಡೆಸಿದರು .