ರೈಲಿಗೆ ಸಿಲುಕಿ ವ್ಯಕ್ತಿಯ ಎರಡೂ ಕಾಲು ತುಂಡು; ಗಾಯಾಳು ಸ್ಥಿತಿ ಗಂಭೀರ

ಹೊಸದಿಗಂತ ವರದಿ, ಹುಬ್ಬಳ್ಳಿ
ಚಲಿಸುತ್ತಿದ್ದ ರೈಲಿಗೆ ಸಿಲುಕಿ ವ್ಯಕ್ತಿಯೊಬ್ಬ ಎರಡು ಕಾಲುಗಳನ್ನು ಕಳೆದುಕೊಂಡು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಘಟನೆ ಗುರುವಾರ ನಗರದ ಕಿಮ್ಸ್ ಹಿಂಬಾಗದ ರೈಲ್ವೆ ಮಾರ್ಗದಲ್ಲಿ ನಡೆದಿದೆ.
ನಗರದ ರೈಲ್ವೆ ನಿಲ್ದಾಣದಿಂದ‌ ಬೆಳಗಾವಿ ಮಾರ್ಗವಾಗಿ ಹೊರಟ ಶಾಲಿಮಾರ್- ವಾಸ್ಕೋಡಿಗಾಮಾ ರೈಲಿಗೆ ವ್ಯಕ್ತಿ ಸಿಲುಕಿದ್ದಾನೆ. ಕಾಲುಗಳ ಮೇಲೆಯೇ ಎರಡು ಬೋಗಿಗಳು ಹಾದುಹೋಗಿದ್ದರಿಂದ ಎರಡು ಕಾಲುಗಳು ತುಂಡಾಗಿವೆ. ಈ ಘಟನೆ ಗಮನಿಸಿದ ಸ್ಥಳೀಯರು ತಕ್ಷಣ ಬಂದು ಹತ್ತಿರವಿದ್ದ ಕಿಮ್ಸ್ ಆಸ್ಪತ್ರೆ ಚಿಕಿತ್ಸೆಗಾಗಿ ರವಾನಿಸಿದ್ದಾರೆ.
ಆತ್ಮಹತ್ಯೆ ಶಂಕೆ:
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ವ್ಯಕ್ತಿಯನ್ನು ಪರಿಶೀಲಿಸಿದಾಗ ಕೈ ಮೇಲೆ ಇದು ನನ್ನ ಹೆಂಡತಿ ನಂಬರ್ ಎಂದು ಆತ ಬರೆದುಕೊಂಡಿರುವುದನ್ನು ಗಮನಿಸಿ ಕರೆ ಮಾಡಿದಾಗ ಆತ ಹೆಗ್ಗೇರಿ ನಿವಾಸಿ ಎಂಬುವುದು ಗೊತ್ತಾಗಿದೆ. ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿರಬಹುದು ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!