ಹೊಸದಿಗಂತ ವರದಿ, ವಿಜಯಪುರ
ಆಕಸ್ಮಿಕ ಅಗ್ನಿ ಅವಘಡದಿಂದ ಜಿಲ್ಲೆಯ ಕೊಲ್ಹಾರ ಪಟ್ಟಣದ ಕೂಡಗಿ ಎನ್ಟಿಪಿಸಿಯಲ್ಲಿನ ತ್ಯಾಜ್ಯ ಸಾಮಗ್ರಿಗಳು ಭಸ್ಮವಾಗಿರುವ ಘಟನೆ ನಡೆದಿದೆ.
ಪೆಟ್ರಾನ್ ಎಂಬ ಕಂಪನಿಯ ಆವರಣದಲ್ಲಿನ ತ್ಯಾಜ್ಯ ಸಾಮಗ್ರಿಗಳು ಭಸ್ಮಗೊಂಡಿದ್ದು, ಬೆಂಕಿ ಧಗಧಗಿಸಿದೆ. ದಟ್ಟ ಹೊಗೆಯ ವಾತಾವರಣ ಕಂಡು ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಕೂಡಲೇ ಅಗ್ನಿ ಶಾಮಕ ಸಿಬ್ಬಂದಿ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿ, ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.
ಕೂಡಗಿ ಎನ್ಟಿಪಿಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ