ಹೊಸದಿಗಂತ ವರದಿ ಕಲಬುರಗಿ:
ಟ್ರ್ಯಾಕ್ಟರ್ನಲ್ಲಿ ಹತ್ತಿ ಲೋಡಿಂಗ್ ಮಾಡುವಾಗ ಆಕಸ್ಮಿಕವಾಗಿ ಬೆಂಕಿ ಹತ್ತಿದ ಪರಿಣಾಮವಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ಹತ್ತಿ ಸುಟ್ಟು ಭಸ್ಮವಾಗಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಜಿಲ್ಲೆಯ ಯಡ್ರಾಮಿ ತಾಲೂಕಿನ ಹಂಗರಗಾ ಕೆ ಗ್ರಾಮದಲ್ಲಿ ರೈತ ಶರಣು ಆಲೂರ್ ಎಂಬವವರು ತಮ್ಮ 10 ಎಕರೆಯ ಜಾಗದಲ್ಲಿ ಹತ್ತಿ ಬೆಳೆದಿದ್ದರು.
ಬೆಳೆದ ಹತ್ತಿಯನ್ನು ಟ್ರ್ಯಾಕ್ಟರ್ ನಲ್ಲಿ ಲೋಡ್ ಮಾಡಿ, ಮಾರುಕಟ್ಟೆಗೆ ಸಾಗಾಟ ಮಾಡಲು ಮುಂದಾಗಿದ್ದರು. ಈ ವೇಳೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅಪಾರ ಪ್ರಮಾಣದ ಹತ್ತಿ ನಾಶವಾಗಿದೆ.
ಹತ್ತಿಗೆ ಬೆಂಕಿ ಬಿದ್ದಾಗ ಹಲವರು ಬೆಂಕಿ ನಂದಿಸಲು ಪ್ರಯತ್ನ ಮಾಡಿದರು, ಕಾಯ೯ಚರಣೆ ಫಲವಾಗದೇ ಹತ್ತಿ ಹಾಳಾಗಿದೆ. ಈ ಕುರಿತು ಯಡ್ರಾಮಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.