ಹೊಸದಿಗಂತ ಡಿಜಿಟಲ್ ಡೆಸ್ಕ್ :
2002ರ ಗುಜರಾತ್ ಕೋಮುಗಲಭೆಯ ವೇಳೆ ಕಲೋಲ್ ನಲ್ಲಿ ನಡೆದಿದ್ದ ಅಲ್ಪಸಂಖ್ಯಾತರ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ 26 ಆರೋಪಿಗಳನ್ನು ಗುಜರಾತ್ ನ್ಯಾಯಾಲಯ ಸಾಕ್ಷ್ಯಾಧಾರ ಕೊರತೆಯಿದೆ ಎಂದು ಹೇಳಿ ದೋಷಮುಕ್ತಗೊಳಿಸಿದೆ.
ಪಂಚಮಹಲ್ ಜಿಲ್ಲೆಯ ಕಲೋಲ್ನಲ್ಲಿರುವ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶೆ ಲೀಲಾಭಾಯಿ ಚುಡಾಸಮಾ ಅವರು ಶುಕ್ರವಾರ ಆರೋಪಿಗಳನ್ನು ಖುಲಾಸೆ ಮಾಡಿದ್ದಾರೆ. ಅತ್ಯಾಚಾರ ಮತ್ತು ಕೊಲೆ ಪ್ರಕರಣದ 39 ಆರೋಪಿಗಳ ಪೈಕಿ 13 ಮಂದಿ ಪ್ರಕರಣದ ವಿಚಾರಣೆಯ ಸಮಯದಲ್ಲಿ ಸಾವನ್ನಪ್ಪಿದ್ದರು. ಅವರ ವಿರುದ್ಧದ ವಿಚಾರಣೆಯನ್ನು ಈ ಹಿಂದೆಯೇ ರದ್ದು ಮಾಡಲಾಯಿತು.
2002ರ ಫೆಬ್ರುವರಿ 27ರಂದು ಗುಜರಾತ್ನ ಗೋದ್ರಾದಲ್ಲಿ ಸಾಬರಮತಿ ರೈಲನ್ನು ಸುಟ್ಟುಹಾಕಲಾಗಿತ್ತು. ಆನಂತರ ಮಾರ್ಚ್ 1 ರಂದು ಎರಡು ಕೋಮುಗಳ ನಡುವಿನ ಕೋಮು ಗಲಭೆ ಭುಗಿಲೆದ್ದು, ಹಿಂಸಾಚಾರಗಳು ಸಂಭವಿಸಿದ್ದವು. ಈಗ ಖುಲಾಸೆಗೊಂಡಿರುವ ಎಲ್ಲ 26 ಆರೋಪಿಗಳೂ ಗಲಭೆಯ ಭಾಗಿಯಾಗಿದ್ದರು.